ಶಹಜಹಾನ್ಪುರ: ನೈರ್ಮಲ್ಯದ ಬಗ್ಗೆ ಅರಿವು ಮೂಡಿಸುವ, ನೈರ್ಮಲ್ಯಕ್ಕಾಗಿ ಅವಿರತವಾಗಿ ದುಡಿಯುವ ಮಂದಿಗೆ ಒಂದು ದಿನದ ಮಟ್ಟಿಗೆ ಶಹಜಹಾನ್ಪುರದ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗುವ ಆಫರ್ ಸಿಕ್ಕಿದೆ. ಅಲ್ಲಿನ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಮೃತ್ ತ್ರಿಪಾಠಿ ಅವರು ಈ ಆಫರ್ನ್ನು ನೀಡಿದ್ದಾರೆ.
ಸ್ವಚ್ಛತೆ ಮತ್ತು ನೈರ್ಮಲ್ಯದ ಬಗ್ಗೆ ಜನರಿಗೆ ಅರಿವು ಮೂಡಿಸುವ ಉದ್ದೇಶದೊಂದಿಗೆ ಅವರು ಅಭಿಯಾನವನ್ನು ಆರಂಭಿಸಿದ್ದು, ಶಾಲಾ ಕಾಲೇಜು ಮಕ್ಕಳ ಸಹಾಯವನ್ನು ಇದಕ್ಕಾಗಿ ಪಡೆಯುತ್ತಿದ್ದಾರೆ. ಇದರ ಭಾಗವಾಗಿಯೇ ಅವರು ಜಿಲ್ಲಾ ಮ್ಯಾಜಿಸ್ಟ್ರೇಟ್ ಮಾಡುವ ಆಫರ್ ನೀಡಿದ್ದಾರೆ.
ಸ್ಥಳಿಯ ಕಾಲೇಜುಗಳ ತಲಾ 4ರಿಂದ 5 ವಿದ್ಯಾರ್ಥಿಗಳನ್ನೊಳಗೊಂಡ ಗುಂಪುಗಳನ್ನು ಇವರು ರಚನೆ ಮಾಡಿದ್ದು, ಸ್ವಚ್ಛ ಭಾರತ ಅಭಿಯಾನ, ನೈರ್ಮಲ್ಯದ ಅರಿವು ಮೂಡಿಸುವ ಕಾರ್ಯಗಳನ್ನು ಇದರ ಮುಖೇನ ನಡೆಸುತ್ತಿದ್ದಾರೆ.
ಶೌಚಾಲಯದ ಬಳಕೆ ಮಾಡಲು ಜನರಿಗೆ ಅರಿವು, ಮನೆಗಳಿಗೆ ವೈಟ್ವಾಶ್, ಪರಿಸರ ಸ್ವಚ್ಛತೆಯ ಕಾರ್ಯಗಳನ್ನು ಈ ವಿದ್ಯಾರ್ಥಿಗಳು ಮಾಡಿದ್ದು, ಜನರಿಗೂ ಪ್ರೇರಣೆ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.