ಶ್ರೀನಗರ: ಕಾಶ್ಮೀರದ 36 ಫುಟ್ಬಾಲ್ ಆಟಗಾರರನ್ನು ಸಿಆರ್ಪಿಎಫ್ ‘ಭಾರತ ದರ್ಶನ’ಕ್ಕೆ ಕಳುಹಿಸಿಕೊಟ್ಟಿದೆ. ಇದರಿಂದಾಗಿ ಅವರಿಗೆ ದೇಶದ ವಿವಿಧ ಭಾಗಗಳನ್ನು ಸುತ್ತಾಡುವ ಅವಕಾಶ ಲಭಿಸಿದೆ.
ಇತ್ತೀಚಿಗೆ ಕಾಶ್ಮೀರ ಸೆಕ್ಟರ್ನ ಸಿಆರ್ಪಿಎಫ್ ಫುಟ್ಬಾಲ್ ಟೂರ್ನಮೆಂಟ್ನ್ನು ಆಯೋಜನೆಗೊಳಿಸಿತ್ತು. ಇದರಲ್ಲಿ ಈ 36 ಆಟಗಾರರು ಪಾಲ್ಗೊಂಡಿದ್ದರು. ಇದೀಗ ಅವರಿಗೆ ಭಾರತ ಸುತ್ತುವ ಸೌಭಾಗ್ಯ ದೊರೆತಿದೆ.
ಕಾಶ್ಮೀರಿ ಯುವಕರನ್ನು ಕ್ರೀಡೆಗೆ ಉತ್ತೇಜಿಸುವುದು ನಮ್ಮ ಪ್ರಮುಖ ಗುರಿ. ಇದರಿಂದ ಅವರಿಗೊಂದು ಬಹಿರಂಗ ಗುರುತಿಸುವಿಕೆ ದೊರೆಯುತ್ತದೆ ಎಂದು ಸಿಆರ್ಪಿಎಫ್ ಐಜಿ ರವಿದೀಪ್ ಸಹಿ ಹೇಳಿದ್ದಾರೆ.
ವಿವಿಧ ರಾಜ್ಯಗಳ ಐತಿಹಾಸಿಕ ಸ್ಥಳಗಳಿಗೆ ಈ ಆಟಗಾರರು ಪ್ರವಾಸ ನಡೆಸಲಿದ್ದಾರೆ. ವಿವಿಧ ಕ್ರೀಡೆಗಳ ಬಗ್ಗೆ ತಿಳಿದುಕೊಳ್ಳಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.