ನವದೆಹಲಿ: ಕಳೆದ ಮೂರು ನಾಲ್ಕು ವರ್ಷದಲ್ಲಿ ಭಾರತದಲ್ಲಿ ಸಕಾರಾತ್ಮಕ ಬದಲಾವಣೆಗಳು ಆಗುತ್ತಿದೆ, ನಮ್ಮ ಅಭಿವೃದ್ಧಿಯ ಪಥದಲ್ಲಿ ಅನಿವಾಸಿ ಭಾರತೀಯರೂ ಪಾಲುದಾರರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ದೆಹಲಿಯಲ್ಲಿ ಅನಿವಾಸಿ ಭಾರತೀಯರ ಪಾರ್ಲಿಮೆಂಟರಿ ಕಾನ್ಫರೆನ್ಸ್ನ್ನು ಉದ್ದೇಶಿಸಿ ಮಾತನಾಡಿದ ಅವರು, ‘ನೀವು ಜಗತ್ತಿನ ವಿವಿಧ ಭಾಗದಲ್ಲಿ ನೆಲೆಸಿರಬಹುದು. ಆದರೆ 3-4 ವರ್ಷದಗಳಲ್ಲಿ ಆಗುತ್ತಿರುವ ಬೆಳವಣಿಗೆಗೆ ಸಾಕ್ಷಿಗಳಾಗಿದ್ದೀರಾ, ವಿಶ್ವ ವೇದಿಕೆಯಲ್ಲಿ ಭಾರತದ ಭಾಗಿತ್ವ ಹೆಚ್ಚಿದೆ. ಭಾರತ ಜಾಗತಿಕ ಮಟ್ಟದಲ್ಲಿ ಗಮನ ಕೇಂದ್ರೀಕರಿಸಿದೆ. ಭಾರತ ಪರಿವರ್ತನೆ ಕಾಣುತ್ತಿದೆ’ ಎಂದಿದ್ದಾರೆ.
‘ಭಾರತಕ್ಕೆ ಅನಿವಾಸಿ ಭಾರತೀಯರು ನೀಡಿದ ಕೊಡುಗೆಗಳನ್ನು ಶ್ಲಾಘಿಸಿದ ಅವರು, ಇಂದು ನಾನು ಭಾರತೀಯ ಸಂಜಾತರ ಮಿನಿ ವರ್ಲ್ಡ್ ಪಾರ್ಲಿಮೆಂಟ್ನ್ನು ನೋಡುತ್ತಿದ್ದೇನೆ. ಇಂದು ಭಾರತೀಯ ಸಂಜಾತರು ಮೊರಿಶಿಯಸ್, ಪೋರ್ಚುಗಲ್, ಐರ್ಲೆಂಡ್ಗಳಲ್ಲಿ ಪ್ರಧಾನಿಗಳಾಗಿದ್ದಾರೆ. ವಿವಿಧ ದೇಶಗಳ ಆಡಳಿತದಲ್ಲಿ ಪ್ರಮುಖ ಸ್ಥಾನ ನಿಭಾಯಿಸುತ್ತಿದ್ದಾರೆ’ ಎಂದರು.
‘ಭಾರತದ ವಿಶೇಷತೆಯನ್ನು ಜಗತ್ತಿಗೆ ಕೊಂಡೊಯ್ಯುವ ಸಾಮರ್ಥ್ಯ ನಿಮಗಿದೆ, ಭಾರತೀಯ ಮೌಲ್ಯಗಳು ಜಗತ್ತಿನ ಸ್ಥಿರತೆಯಲ್ಲಿ ಮಹತ್ವದ ಪಾತ್ರ ನಿಭಾಯಿಸಬಹುದಾಗಿದೆ, ಭಾರತದ ಅಭಿವೃದ್ಧಿಗೆ ಕೊಡುಗೆಗಳನ್ನು ನೀಡಿ, ಭಾರತದ ಅಗತ್ಯತೆಯನ್ನು ಮನಗಾಣಿ’ ಎಂದು ಮೋದಿ ಕರೆ ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.