ಇಸ್ಲಾಮಾಬಾದ್: ಜೈಲಿನಲ್ಲಿ ಬಂಧಿಯಾಗಿರುವ ಕುಲಭೂಷಣ್ರನ್ನು ನೋಡುವ ಸಲುವಾಗಿ ಅವರ ತಾಯಿ ಮತ್ತು ಪತ್ನಿ ಪಾಕಿಸ್ಥಾನಕ್ಕೆ ಭೇಟಿಕೊಟ್ಟಿದ್ದರು. ಈ ವೇಳೆ ಆ ದೇಶ ಅವರನ್ನು ತುಂಬಾ ಕೆಟ್ಟದಾಗಿ ನಡೆಸಿಕೊಂಡಿದೆ ಎಂಬ ಆರೋಪ ಕೇಳಿ ಬಂದಿದೆ.
‘ಕುಲಭೂಷಣ್ ಅವರ ತಾಯಿ ಆವಂತಿ ಮತ್ತು ಪತ್ನಿ ಚೇತನ್ ಕುಲ್ ಅವರ ತಾಳಿ, ಬಲೆ ಮತ್ತು ಕುಂಕುಮಗಳನ್ನು ತೆಗೆಸಲಾಗಿತ್ತು. ಭೇಟಿಯ ವೇಳೆ ಒತ್ತಾಯಪೂರ್ವಕವಾಗಿ ಬೇರೆ ಬಟ್ಟೆಗಳನ್ನು ಧರಿಸಲು ಕೊಡಲಾಗಿತ್ತು’ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ಆರೋಪಿಸಿದೆ.
ಅಷ್ಟೇ ಅಲ್ಲದೇ ಮಗನೊಂದಿಗೆ ಮಾತೃಭಾಷೆಯಾದ ಮರಾಠಿಯಲ್ಲಿ ಮಾತನಾಡಲೂ ಆವಂತಿ ಅವರಿಗೆ ಅವಕಾಶವನ್ನು ಕೊಡಲಾಗಿಲ್ಲ, ಚೇತನ್ ಅವರು ಧರಿಸಿದ್ದ ಶೂಗಳನ್ನೂ ಪಾಕ್ ವಾಪಾಸ್ ಮಾಡಿಲ್ಲ ಎಂದು ಆರೋಪಿಸಿದೆ.
ಪಾಕ್ ಮಾಧ್ಯಮಗಳೂ ಅನಾಗರಿಕವಾಗಿ ವರ್ತಿಸಿದ್ದು, ಅಪರಾಧಿ ಮಗನ ತಾಯಿ ಎಂದು ದೂಷಿಸಿವೆ ಹಿಂಸಿಸಿವೆ ಎನ್ನಲಾಗಿದೆ.
ಒಟ್ಟಾರೆ ಪಾಕಿಸ್ಥಾನ ಭೆಟಿಗೆ ಅವಕಾಶಕೊಡುವ ನಾಟಕವಾಡಿ ಅವಮಾನಿಸಿದೆ ಎಂದರೆ ತಪ್ಪಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.