News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಯಮೆನ್ ತೊರೆಯಲು ಭಾರತೀಯರಿಗೆ ಸಲಹೆ

yamenನವದೆಹಲಿ: ಯಮೆನ್ ಯುದ್ಧ ಪೀಡಿತಗೊಳ್ಳುತ್ತಿದ್ದು ಅಲ್ಲಿನ ಜನರ ಪರಿಸ್ಥಿತಿ ಅತಂತ್ರಗೊಂಡಿದೆ. ಹೀಗಾಗಿ ಅಲ್ಲಿರುವ ಭಾರತೀಯರು ಯಮೆನ್ ಬಿಟ್ಟು ಶೀಘ್ರವೇ ವಾಪಾಸ್ಸಾಗುವುದು ಒಳಿತು ಎಂದು ಭಾರತ ಸರ್ಕಾರ ಸಲಹೆ ನೀಡಿದೆ.

‘ಯಮೆನ್‌ನಲ್ಲಿ ಒಟ್ಟು 3,5೦೦ ಭಾರತೀಯರಿದ್ದಾರೆ. ಅದರಲ್ಲಿ 2,5೦೦ ಮಂದಿ ರಾಜಧಾನಿ ‘ಸನಾ’ದಲ್ಲಿಯೇ ಇದ್ದಾರೆ. ಯಮೆನ್ ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಹೀಗಾಗಿ ಭಾರತೀಯರು ದಯವಿಟ್ಟು ಯಮೆನ್ ತೊರೆದು ಭಾರತಕ್ಕೆ ಆಗಮಿಸಬೇಕು’ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಬುಧವಾರ ಸಂಜೆ ಟ್ವಿಟರ್ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ಶಿಯಾ ಬಂಡುಕೋರರು ಈಗಾಗಲೇ ಅಲ್ಲಿನ ಅಧ್ಯಕ್ಷೀಯ ಅರಮನೆಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೇ ಅಧ್ಯಕ್ಷ ಹದಿಯವರನ್ನು ದೇಶದಿಂದ ಹೊರಕ್ಕೆ ಅಟ್ಟಿದ್ದಾರೆ. ದಕ್ಷಿಣದಲ್ಲಿನ ಬಂದರನ್ನೂ ವಶಪಡಿಸಿಕೊಂಡಿರುವುದಾಗಿ ಘೋಷಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅಲ್ಲಿನ ಜನ ಅತಂತ್ರಗೊಂಡಿದ್ದಾರೆ. ಭಾರತೀಯರ ಸುರಕ್ಷತೆಯ ಬಗ್ಗೆಯೂ ಗ್ಯಾರಂಟಿ ಇಲ್ಲ.

ಭಾರತ ಅಲ್ಲಿನ ಭಾರತೀಯರಿಗೆ ಜ.1, ಮಾ.19 ಮತ್ತು ನಿನ್ನೆ ಒಟ್ಟು ಮೂರು ಬಾರಿ ಯೆಮೆನ್ ತೊರೆಯುವಂತೆ ಸಲಹೆ ನೀಡಿದೆ. ಅಲ್ಲದೇ ಅವರಿಗೆ ಬೇಕಾದ ಎಲ್ಲಾ ಸಹಕಾರವನ್ನೂ ನೀಡುವುದಾಗಿ ಹೇಳಿದೆ. ಹೆಚ್ಚಿನ ಭಾರತೀಯರು ಅಲ್ಲಿ ನರ್ಸ್‌ಗಳಾಗಿ ದುಡಿಯುತ್ತಿದ್ದಾರೆ.

ಯುದ್ಧಪೀಡಿತ ಪ್ರದೇಶದಿಂದ ಸುರಕ್ಷತಾ ಸ್ಥಳಗಳಿಗೆ ಪಲಾಯಣ ಮಾಡಿ ಮತ್ತು ಭಾರತೀಯ ರಾಯಭಾರಿ ಕಛೇರಿಯೊಂದಿಗೆ ಸದಾ ಸಂಪರ್ಕದಲ್ಲಿರಿ ಎಂದು ಭಾರತ ಸಲಹೆ ಮಾಡಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top