News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

2015-16ನೇ ಸಾಲಿಗೆ ಬಜೆಟ್ ಮಂಡನೆ

ಬಂಟ್ವಾಳ: ಇಲ್ಲಿನ ಪುರಸಭೆಯಲ್ಲಿ 2015-16ನೇ ಸಾಲಿಗೆ ಬುಧವಾರ ನಡೆದ ವಿಶೇಷ ಸಭೆಯಲ್ಲಿ 50.43 ಲಕ್ಷ ರೂಪಾಯಿ ಮಿಗತೆ ಬಜೆಟ್ ಮಂಡಿಸಲಾಯಿತು.

25-Mar-Purasabhe--2

ಆರಂಭಿಕ ಶುಲ್ಕ 62.84 ಕೋಟಿ ರೂ. ಆಗಿತ್ತು. ಒಟ್ಟು 34.03 ಕೋಟಿ ರೂ. ಆದಾಯವನ್ನು ನಿರೀಕ್ಷಿಸಿದ್ದು 27.75 ಕೋಟಿ ರೂ. ಜಮೆ ಹಾಗೂ 33.53 ಕೋಟಿ ರೂ. ಖರ್ಚನ್ನು ನಿರೀಕ್ಷಿಸಲಾಗಿದೆ ಎಂದು ಅಧ್ಯಕ್ಷೆ ವಸಂತಿ ಚಂದಪ್ಪ ಅವರು ಸಭೆಗೆ ವಿವರಿಸಿದರು.

ಈ ಆಯ ವ್ಯಯವನ್ನು ಆಕ್ಷೇಪಿಸಿದ ಬಿಜೆಪಿ ಸದಸ್ಯ ದೇವದಾಸ ಶೆಟ್ಟಿ ಆರಂಭದ ಶುಲ್ಕ ಒಳಗೊಂಡು ಮಿಗತೆ ಬಜೆಟ್ ಸಾಧ್ಯವಿಲ್ಲ. ವಾರ್ಷಿಕ ಖರ್ಚು-ಆದಾಯದಲ್ಲಿ ಉಳಿಕೆ ಬಂದರೆ ಮಾತ್ರ ಮಿಗತೆ ಬಜೆಟ್ ಸಾಧ್ಯ ಎಂದು ವಾದಿಸಿದರು. ಉಳಿಕೆ ಶುಲ್ಕವ್ಕನ್ನು ಹಾಗೆಯೇ ಇಟ್ಟುಕೊಳ್ಳುವ ಕ್ರಮವಿಲ್ಲ. ಪ್ರತೀ ವರ್ಷವೂ ಅದು ವಾರ್ಷಿಕ ಲೆಕ್ಕಕ್ಕೆ ಬರುತ್ತದೆ ಎಂದು ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಸ್ಪಷ್ಟನೆ ನೀಡಿದರಾದರೂ ಬಿಜೆಪಿ ಸದಸ್ಯರು ಇದನ್ನು ಒಪ್ಪಲಿಲ್ಲ.

ನೋಟಿಸ್ ಜಾರಿ:
ಒಂದೇ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಕುಡಿಯುವ ನೀರು ಸಂಪರ್ಕ ಪಡೆದಿರುವ ಯಾವುದೇ ಒಬ್ಬ ಪ್ರಭಾವಿಗಳಿಗೆ ನೋಟಿಸ್ ಜಾರಿಗೊಳಿಸಿದ್ದರೆ ಸಭೆಗೆ ವಿವರಿಸಿ ಎಂದು ವಿಪಕ್ಷ ನಾಯಕ ಎ. ಗೋವಿಂದ ಪ್ರಭು ಅಧಿಕಾರಿಗಳಿಗೆ ಈ ಸಂದರ್ಭದಲ್ಲಿ ಸವಾಲು ಹಾಕಿದರು. ಬಜೆಟ್ ಚರ್ಚೆಯ ವೇಳೆ ಮಾತನಾಡಿದ ಅವರು ಅಕ್ರಮ ನಳ್ಳಿ ನೀರಿನ ಸಂಪರ್ಕ ಪಡೆದವರ ಮೇಲೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ಅಧ್ಯಕ್ಷೆ ವಸಂತಿ ಚಂದಪ್ಪ ಅವರು, ಅನಧಿಕೃತ ನಳ್ಳಿ ಸಂಪರ್ಕ ಪಡೆದಿರುವವರಿಗೆ ಈಗಾಗಲೇ ನೋಟೀಸ್ ಜಾರಿಗೊಳಿಸಲಾಗಿದ್ದು, ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

25-Mar-Purasabhe-3

ಗೋವಿಂದ ಪ್ರಭು ಅವರು ಯಾವುದೋ ಬಡವರಿಗೆ ನೋಟೀಸ್ ನೀಡಿ ಸಾಚಾರ ಆಗುವುದು ಬೇಡ. ಪ್ರಭಾವಿಗಳು ಒಂದಕ್ಕಿಂತ ಹೆಚ್ಚುವರಿಯಾಗಿ ಅನಧಿಕೃತ ನೀರಿನ ಸಂಪರ್ಕ ಪಡೆದು ರಾಜಾರೋಷವಾಗಿ ಪುರಸಭೆಯ ಕುಡಿಯುವ ನೀರನ್ನು ಬೇಕಾಬಿಟ್ಟಿ ವ್ಯಯಿಸುತ್ತಿದ್ದಾರೆ. ಇದಕ್ಕೆ ಸದಸ್ಯರಾದ ವಾಸು ಪೂಜಾರಿ, ಸದಾಶಿವ ಬಂಗೇರ, ಬಿ ಮೋಹನ್ ಅವರು ಧ್ವನಿಗೂಡಿಸಿದರು.

ಉಪಾಧ್ಯಕ್ಷೆ ಯಾಸ್ಮಿನ್ ಅಹಮದ್, ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಉಪಸ್ಥಿತರಿದ್ದರು. ಸದಸ್ಯರಾದ ಮುಹಮ್ಮದ್ ನಂದರಬೆಟ್ಟು, ಶರೀಫ್ ಶಾಂತಿ ಅಂಗಡಿ, ಜಗದೀಶ್ ಕುಂದರ್, ಪ್ರವೀಣ್ ಬಿ. ಮೊದಲಾದವರು ಚರ್ಚೆಯಲ್ಲಿ ಪಾಲ್ಗೊಂಡರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top