
ನವದೆಹಲಿ: ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರ “ಗೋಮೂತ್ರ ತಜ್ಞ” ಹೇಳಿಕೆಯನ್ನು ಖಂಡಿಸಿ 200 ಕ್ಕೂ ಹೆಚ್ಚು ಉಪಕುಲಪತಿಗಳು, ಮಾಜಿ ಉಪಕುಲಪತಿಗಳು ಮತ್ತು ಶಿಕ್ಷಣ ತಜ್ಞರು ಬಹಿರಂಗ ಪತ್ರ ಬರೆದಿದ್ದಾರೆ.
ಐಐಟಿ ಮದ್ರಾಸ್ ನಿರ್ದೇಶಕ ವಿ. ಕಾಮಕೋಟಿ ಅವರನ್ನು ಉದ್ದೇಶಿಸಿ ಪ್ರಿಯಾಂಕ ವಾದ್ರಾ ಅವರು ಗೋ ಮೂತ್ರ ತಜ್ಞ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ವ್ಯಾಪಕ ಖಂಡನೆಗಳು ವ್ಯಕ್ತವಾಗಿತ್ತು. ಮಹಾನ್ ಸಾಧನೆ ಮಾಡಿರುವ ವಿಜ್ಞಾನಿಯನ್ನು ಅವಮಾನಿಸಿದ ಪ್ರಿಯಾಂಕ ನಡೆಗೆ ಹಲವು ಮಂದಿ ಟೀಕೆ ವ್ಯಕ್ತಪಡಿಸಿದ್ದಾರೆ.
ಒಬ್ಬ ಪ್ರತಿಷ್ಠಿತ ವಿಜ್ಞಾನಿಯನ್ನು ತಿರಸ್ಕರಿಸುವ ಮತ್ತು ಹಣೆಪಟ್ಟಿ ಕಟ್ಟುವ ಮನಸ್ಥಿತಿಗೆ ಇಳಿಸುವುದರಿಂದ ವೈಜ್ಞಾನಿಕ ಮನೋಭಾವ ದುರ್ಬಲಗೊಳ್ಳುತ್ತದೆ ಮತ್ತು ವಿದ್ವಾಂಸರು ಸಾರ್ವಜನಿಕ ಚರ್ಚೆಯಲ್ಲಿ ಭಾಗವಹಿಸಲು ನಿರುತ್ಸಾಹಗೊಳ್ಳುತ್ತಾರೆ ಎಂದು ಸಹಿದಾರರು ವಾದಿಸಿದ್ದಾರೆ.
150 ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು, ಹಲವಾರು ಆರ್ & ಡಿ ಯೋಜನೆಗಳು ಮತ್ತು ಭಾರತದ ಮೊದಲ ಸ್ಥಳೀಯ ಕೈಗಾರಿಕಾ ದರ್ಜೆಯ ಮೈಕ್ರೋಪ್ರೊಸೆಸರ್ ಅನ್ನು ಅಭಿವೃದ್ಧಿಪಡಿಸುವಲ್ಲಿ ಅವರ ಪಾತ್ರ ಸೇರಿದಂತೆ ಕಾಮಕೋಟಿಯವರ ಶೈಕ್ಷಣಿಕ ದಾಖಲೆಯನ್ನು ಪತ್ರದಲ್ಲಿ ಒತ್ತಿ ಹೇಳಲಾಗಿದೆ.
ಭಾರತದ ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ಶಿಫಾರಸು ಮಾಡಲು ರಚಿಸಲಾದ ಕಾರ್ಯಪಡೆಯಲ್ಲಿ ಕಾಮಕೋಟಿಯವರ ಸೇರ್ಪಡೆಯನ್ನು ಪ್ರಶ್ನಿಸುವಾಗ ಪ್ರಿಯಾಂಕಾ ಗಾಂಧಿ ಈ ಹೇಳಿಕೆ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



