ಮಂಗಳೂರು : ಅರೋರಾ ತಂಡ ನಿರ್ಮಾಣದ “ಮೇ.22 ದ ಲಾಸ್ಟ್ ಫೈಟ್” ಮೋಷನ್ ಪಿಕ್ಚರ್ ಇಂದು ಮಂಗಳೂರಿನ ಬಿಗ್ ಸಿನಿಮಾದಲ್ಲಿ ಬಿಡುಗಡೆಗೊಂಡಿತು. ಈ ಆಲ್ಬಂನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು, ಒಂದು ಕುಟುಂಬದ ನೆಮ್ಮದಿಯ ಬದುಕಿಗೆ ಇಂತಹ ಜೀವಹಾನಿಗಳು ಬಹಳ ದೊಡ್ಡ ಆಘಾತವನ್ನು ತಂದು ಒಡ್ಡುತ್ತದೆ. ಈ ತಂಡದಿಂದ ಮೂಡಿಬಂದಿರುವ ಈ ಆಲ್ಬಂನಲ್ಲಿ ಆ ಕರಾಳ ದಿನದ ನೆನಪು ಮತ್ತು ಇವತ್ತಿಗೂ ತಮ್ಮವರನ್ನು ಕಳೆದುಕೊಂಡ ಆ ಕುಟುಂಬಗಳ ನೋವನ್ನು ವ್ಯಕ್ತಪಡಿಸುವಂತಿತ್ತು ಎಂದು ತಂಡದ ಪ್ರಯತ್ನವನ್ನು ಶಾಘ್ಲಸಿದರು .
ಕಾರ್ಯಕ್ರಮಕ್ಕೆ ದೀಪ ಬೆಳಗಿಸಿ, ಚಾಲನೆ ನೀಡಿದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ ಜೆ.ಟಿ.ರಾಧಾಕೃಷ್ಣ ,ತಂಡದ ವಿಶಿಷ್ಟ ಪ್ರಯತ್ನವನ್ನು ಬೆಂಬಲಿಸಬೇಕೆಂದು ಕೋರಿದರು. ಭಾರತ್ ಬಿಗ್ ಸಿನಿಮಾದ ಮುಖ್ಯಸ್ಥರಾದ ಬಾಲಕೃಷ್ಣ ಶೆಟ್ಟಿ, ರೆಡ್ರಾಕ್ಸ್ ಬಿಲ್ಡರ್ಸ್ ನ ಮಾಲಕರಾದ ಪ್ರಶಾಂತ್ ರಸ್ಕಿನ್ಹಾ, ತಂಡದ ಸದಸ್ಯರು ಮತ್ತಿತರು ಉಪಸ್ಥತರಿದ್ದರು.
“ಮೇ 22 ದಿ ಲಾಸ್ಟ್ ಫ್ಲೈಟ್” ದೇಶವನ್ನೇ ಬೆಚ್ಚಿಬೀಳಿಸಿದ ಮಂಗಳೂರು ವಿಮಾನ ದುರಂತದ ಸುತ್ತ ಹೆಣೆದ ಒಂದು ಸಂಗೀತರೂಪಕ. ಪ್ರಿಯಕರನಿಗಾಗಿ ವಿಮಾನನಿಲ್ದಾಣದಲ್ಲಿ ಕಾಯುತ್ತಿರುವ ಪ್ರೇಯಸಿ,ಈ ನಡುವೆ ಪ್ರೀತಿಯ ನೆನಪುಗಳು, ಕೊನೆಯಲ್ಲಿ ವಿಮಾನ ದುರಂತದ ದೃಶ್ಯಗಳು ಕಣ್ಣಮುಂದೆ ಕಟ್ಟಿದಂತಿರುತ್ತದೆ. ವಿಶ್ಯುಲ್ದೃಶ್ಯಗಳ ಹೊರತಾಗಿ,ಸುಮಾರು 5000 ಸ್ಟಿಲ್ ಇಮೇಜಸ್ಗಳನ್ನು ಹಾಗೂ 25 ಸಾವಿರ ಲೇಯರ್ಸಗಳನ್ನು ಬಳಸಿ ನಿರ್ಮಿಸಿದ ಒಂದು ವಿನೂತನ ಪ್ರಯತ್ನ. ಪ್ರತ್ಯೇಕವಾಗಿ ತುಳು,ಕನ್ನಡ, ಹಾಗೂ ಹಿಂದಿ ಭಾಷೆಯಲ್ಲಿರುವ ಈ ಆಲ್ಬಂ ಕರ್ನಾಟಕದ ಮೊದಲ ಮೋಷನ್ಫಿಕ್ಟರ್ ಎನಿಸಿಕೊಳ್ಳಲಿದೆ.
ವಿ.ಜೆ ವಿನೀತ್ ಈ ಆಲ್ಬಂನ ನಾಯಕನಟನಾಗಿದ್ದು ಮೊದಲ ಬಾರಿಗೆ ಕ್ಯಾಮರಾ ಎದುರಿಸುತ್ತಿರುವ ನೇಹಾಲ್ಪರಿಣಿತ ನಾಯಕಿ. ದಿನೇಶ್ಆಚಾರ್ಯ ಅವರ ಪರಿಕಲ್ಪನೆ,ನಿರ್ದೇಶನದ ಈ ಆಲ್ಬಂಗೆ ಸಾಹಿತ್ಯ ಬರೆದವರು ಶಶಿರಾಜ್ರಾವ್ ಕಾವೂರ್, ಕರಣ್ಮಂಜುನಾಥ್ ಹಾಗೂ ಮಹಮ್ಮದ್ ಇಬಾದ್ .ಡಾ.ನಿತಿನ್ಆಚಾರ್ಯ ಅವರ ಸಂಗೀತ, ಹರೀಶ್ನಾಯಕ್.ಕೆ ಅವರ ಛಾಯಾಗ್ರಹಣವಿರುವ ಈ ಅಲ್ಬಂನ ಸಹನಿರ್ದೇಶಕ ನಿತೇಶ್ಕುಲಾಲ್. ನಿರ್ಮಾಣ ನಿರ್ವಹಣೆಯ ಜವಾಬ್ದಾರಿ ಮೈಮ್ರಾಮ್ದಾಸ್ ನೇರವೇರಿಸಿದ್ದಾರೆ .
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.