ಮಂಗಳೂರು: ಶಾರದಾ ವಿದ್ಯಾಲಯದ ನಿತ್ಯ ನಿರಂತರ ಯೋಗಾಸನ ಶಾಖೆಯ ಉದ್ಘಾಟನೆ, 108 ಸಾಮೂಹಿಕ ಸೂರ್ಯನಮಸ್ಕಾರ ಈ ಕಾರ್ಯಕ್ರಮಗಳನ್ನು ಪ್ರೊ. ಎಂ.ಬಿ. ಪುರಾಣಿಕ್, ಅಧ್ಯಕ್ಷರು ಶಾರದಾ ವಿದ್ಯಾ ಸಂಸ್ಥೆಗಳು ಕೊಡಿಯಾಲಬೈಲ್, ಮಂಗಳೂರು ಇವರು ಜ್ಯೋತಿ ಬೆಳಾಗಿಸಿ ಚಾಲನೆ ನೀಡಿದರು.
ಈ ಭರತ ಭೂಮಿಯ ದೊಡ್ಡ ಆಸ್ತಿ ಯೋಗ, ಯೋಗಾಸನ, ಪ್ರಾಣಯಾಮ. ಈ ಕ್ರಿಯೆಗಳನ್ನು ದೈನಂದಿನ ಜೀವನದಲ್ಲಿ ನಿತ್ಯ ನಿರಂತರವಾಗಿ ಅಭ್ಯಾಸ ಮಾಡಿದರೆ ಮನುಷ್ಯ ನಿಶ್ಚಿಂತೆಯಿಂದ ಆರೋಗ್ಯವಂತನಾಗಿ ಬಾಳಬಹುದು. ಎಲ್ಲಾ ರೋಗಗಳಿಗೆ ಹಾಗೂ ಮನಸ್ಸಿನ ಶಾಂತಿ ನೆಮ್ಮದಿಯನ್ನು ಕಾಪಾಡಲು ಯೋಗ ಬಹು ದೊಡ್ಡ ಸಾಧನ. ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ ಕಾಯಾ-ವಾಚಾ-ಮನಸಾ ಪತಂಜಲಿ ಯೋಗ ಶಿಕ್ಷಣ ಸಂಸ್ಥೆ ರಾಜ್ಯಾದ್ಯಾಂತ ಹಲವಾರು ಶಾಖೆಗಳನ್ನು ಪ್ರಾರಂಭಿಸಿ ವ್ಯಕ್ತಿಯ ಸಂಸ್ಕಾರಯುತ ಜೀವನ ಮತ್ತು ಸ್ವಾಸ್ಥ್ಯ ಸಮಾಜಕ್ಕೆ ಸಂಸ್ಥೆ ನೀಡಿದ ದೊಡ್ಡ ಕೊಡುಗೆಯಾಗಿದೆ. ರಥ ಸಪ್ತಮಿಯ ಈ ಪರ್ವ ದಿನದಂದು ಸಾಮೂಹಿಕ ಸೂರ್ಯನಮಸ್ಕಾರವನ್ನು ಪತಂಜಲಿ ಶಿಕ್ಷಣ ಸಮಿತಿಯ ಎಲ್ಲಾ ಯೋಗ ಬಂಧುಗಳು ನಡೆಸುವುದು ಬಹಳ ಶ್ಲಾಘನೀಯ ಎಂದು ಸಂಸ್ಥೆಯ ಬಗ್ಗೆ ಗೌರವದ ಮಾತುಗಳನ್ನಾಡಿದರು.
ಮತ್ತೊರ್ವ ಮುಖ್ಯ ಅತಿಥಿ ನಿವೃತ್ತ ಪ್ರಾಧ್ಯಾಪಕರಾದ ಡಾ| ಶಿಕಾರಿಪುರ ಕೃಷ್ಣಮೂರ್ತಿ, ಯೋಗ-ಯೋಗಾಸಾನ-ಪ್ರಾಣಯಾಮ ಮತ್ತು ೧೦೮ ಸೂರ್ಯನಮಸ್ಕಾರಗಳ ಮಹತ್ವದ ಬಗ್ಗೆ ಭೌದ್ಧಿಕ್ ನೆರವೇರಿಸಿದರು.
ವೇದಿಕೆಯಲ್ಲಿ ಸಂಘಟಕರಾದ ಶ್ರೀ ರವೀಶ್ ಶ್ರೀ ಶಿವಾನಂದ ಹಾಗೂ ಶ್ರೀ ದಯಾನಂದ ಕಟೀಲ್ ಉಪಸ್ಥಿತರಿದ್ದರು. ಶ್ರೀಮತಿ ಶ್ರುತಿ ಸ್ವಾಗತಿಸಿ, ಶ್ರೀ ಆನಂದ ಧನ್ಯವಾದ ನೀಡಿದರು. ಶ್ರೀ ನವೀನ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಶ್ರೀ ಬಿಂದುಸಾರ ಶೆಟ್ಟಿ ೪೮ ದಿನ ನಡೆದ ಯೋಗ ಶಿಬಿರದ ವರದಿಯನ್ನು ವಾಚಿಸಿದರು. ಶಿಬಿರಾರ್ಥಿಗಳು ಶಿಬಿರದಾಲ್ಲಿ ತಮಗಾದ ಪ್ರೇರಣಾದಾಯಿ ಅನುಭವವನ್ನು ಹಂಚಿಕೊಂಡರು. ವಂದೇ ಮಾತರಂ ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.