ಮೂಲ್ಕಿ : ಶ್ರೀ ವೆಂಕಟರಮಣ ದೇವಸ್ಥಾನದ ವೈಭವೋಪೇತ ಪ್ರತಿಷ್ಠಾ ಹುಣ್ಣಿಮೆಯ ಮಹೋತ್ಸವವು ಡಿಸೆಂಬರ್ 25 ರ ಶುಕ್ರವಾರದಂದು ಜರುಗಲಿದೆ. ಡಿ.25 ರ ಬೆಳಗ್ಗೆ 8 ಗಂಟೆಗೆ “ನಗರ ಕಾಣಿಕೆ” ಯು ಮೆರವಣಿಗೆ ಬೆಳಗ್ಗೆ 9 ಗಂಟೆಗೆ ಮಹಾಪ್ರಾರ್ಥನೆ ನೆರವೇರಲಿದೆ.
ಬಳಿಕ ಶ್ರೀ ಕಾಶೀ ಮಠ ಸಂಸ್ಥಾನದ ಕಿರಿಯ ಯತಿವರೇಣ್ಯರಾಗಿರುವ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಶ್ರೀ ಉಗ್ರ ನರಸಿಂಹ ದೇವರಿಗೆ ಪಂಚಾಮೃತ ಹಾಗೂ ಶೀಯಾಳಾಭಿಷೇಕ ನಡೆಯಲಿರುವುದು.
ಸಂಜೆ 5 ಗಂಗಾ, ಭಾಗೀರಥಿ ಹಾಗೂ ಕನಕಾಭಿಷೇಕದ ಬಳಿಕ 7:30 ಗಂಟೆಗೆ ಮಹಾನೈವೇದ್ಯ, ಮಹಾಪೂಜೆ ದರ್ಶನಸೇವೆ ಹಾಗೂ ಸಮಾರಾಧನೆಯ ಕಾರ್ಯಕ್ರಮಗಳು ನಡೆಯಲಿವೆ.
ಆ ಬಳಿಕ ಮಧ್ಯರಾತ್ರಿ 12 ಗಂಟೆಗೆ ರಾತ್ರಿ ಪೂಜೆ, ದೀಪಾರಾಧನಾ, ರಥ ಉತ್ಸವ, ವಿಶ್ರಾಂತಿ ಪೂಜೆ ಹಾಗೂ ನಿತ್ಯೊತ್ಸವದೊಂದಿಗೆ ದರ್ಶನ ಸೇವೆ, ಅಂತೆಯೇ 5:30 ಮುಂಜಾನೆಯಜಾವ ಚಂದ್ರ ಮಂಡಲ ಉತ್ಸವ, ವಸಂತ ಪೂಜೆ ಜರುಗಲಿರುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.