ಮಂಗಳೂರು : ಸ್ವಸ್ತಿ ಆರ್ಎಕ್ಸ್ಲೈಫ್ ಟ್ರಸ್ಟ್ ನಿಯೋಜಿತ 9ನೇ ವರ್ಷದ ಆರ್ಎಕ್ಸ್ಲೈಫ್ ಹರ್ಕ್ಯುಲಸ್ ಸೈಕಲ್ ರ್ಯಾಲಿಯು ಡಿಸೆಂಬರ್ 6 ರ ಆದಿತ್ಯವಾರ ಮಂಗಳೂರಿನಲ್ಲಿ ನಡೆಯಲಿದೆ .
ಬೆಳಿಗ್ಗೆ 6-30ಗಂಟೆಗೆ ಲೇಡಿಹಿಲ್ ವೃತ್ತದಿಂದ ಹೊರಡುವ 21 ಕಿ.ಮೀ ದೂರದ ಈ ಸೈಕಲ್ ರ್ಯಾಲಿಯನ್ನು ಮಂಗಳೂರು ಪೊಲೀಸ್ ಕಮೀಷನರ್ ಎಸ್.ಮುರುಗನ್ ಇವರು ಉದ್ಘಾಟಿಸಲಿದ್ದಾರೆ. ರ್ಯಾಲಿಯು ಬಿಜೈ-ಮಾಲೆಮಾರ್-ಕೂಳೂರು-ಪಣಂಬೂರು-ಉರ್ವಸ್ಟೋರ್-ಅಶೋಕನಗರ-ಹೊಗೆಬೈಲ್-ಬತ್ತೇರಿ ಮಾರ್ಗವಾಗಿ 9-00ರಿಂದ 9-30 ಗಂಟೆ (ಬೆಳಿಗ್ಗೆ) ಸಮಯಕ್ಕೆ ಅಮೃತ ವಿದ್ಯಾಲಯಂ ಮೈದಾನದಲ್ಲಿ ಸಮಾರೋಪಗೊಳ್ಳಲಿದೆ ಎಂದು ಸ್ವಸ್ತಿ ಆರ್ ಎಕ್ಸ್ ಲೈಫ್ ಟ್ರಸ್ಟ್
ಪ್ರಮುಖರಾದ ಗಾಯತ್ರಿ ಭಟ್ ಮತ್ತು ವಂದನಾ ನಾಯಕ್ ತಿಳಿಸಿದ್ದಾರೆ .
ವರ್ಷ 2007 ರಲ್ಲಿ 240 ಸವಾರರಿದ್ದ ಈ ರ್ಯಾಲಿಯು ಸಾರ್ವಜನಿಕರ ಸತತ ಪ್ರೋತ್ಸಾಹದಿಂದ ಕಳೆದ ಬಾರಿ 2200 ಸಂಖ್ಯೆದಾಟಿದ್ದು, ಈ ಬಾರಿ ಇದಕ್ಕೂ ಮೀರಿದ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ದಟ್ಟ ವಾಹನ ಸಾರಿಗೆಯಿಂದಾಗಿ ಸೈಕಲ್ ತುಳಿಯಲು ಅಂಜುತ್ತಿರುವ ಹಲವರಿಗೆ ಈ ರ್ಯಾಲಿಯು 21 ಕಿ.ಮೀ ಸೈಕ್ಲಿಂಗ್ ಸವಾರಿಯ ಅನುಭವ, ಹಲವು ಸವಾರರ ಜೊತೆ ತಮ್ಮ ನಗರದ ಸುತ್ತಲಿನ ಸೌಂದರ್ಯವನ್ನು ಸವಿಯುವ ಅವಕಾಶ ಹಾಗೂ ಎಂದೂ ಸಾಗದ ಹೊರರಸ್ತೆಗಳ ಪರಿಚಯವನ್ನು ನೀಡುತ್ತಾ ಬಂದಿದೆ. ಈ ರ್ಯಾಲಿಯು ಯಾವುದೇ ಸ್ಪರ್ಧೆ ಯಾ ರೇಸ್ ಅಲ್ಲ.
ರಸ್ತೆ ಸುರಕ್ಷತೆ ಈ ಸಲದ ರ್ಯಾಲಿಯ ಉದ್ದೇಶವಾಗಿದ್ದು “ಸುರಕ್ಷಿತ ರಸ್ತೆ-ಸುರಕ್ಷಿತ ಸವಾರಿ” ಧ್ಯೇಯವಾಕ್ಯ. ನಗರದ ರಸ್ತೆಗಳು ದ್ವಿಚಕ್ರ ವಾಹನ ಸವಾರರಿಗೆ ಸುರಕ್ಷಿತವಾಗಿರುವಂತೆ ಸಂಬಂಧ ಪಟ್ಟವರಲ್ಲಿ ಆಗ್ರಹಿಸಲು ಹಾಗೂ ಚತುಷ್ಚಕ್ರ ವಾಹನ ಚಾಲಕರು ಸೈಕಲ್ ಸವಾರರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ಪ್ರೇರೇಪಿಸಲು ಈ ರ್ಯಾಲಿಯು ಸಹಾಯಕಾರಿಯಾಗಲಿದೆ.
ಭಾಗವಹಿಸುವ ಸವಾರರುಮುಂಚಿತವಾಗಿ ನೋಂದಣಿಯನ್ನು ಮಾಡಬೇಕಾಗಿದ್ದು, ಮಣ್ಣಗುಡ್ಡ ಹಾಗೂ ಪಾಂಡೇಶ್ವರದಲ್ಲಿರುವ ಆರ್ಎಕ್ಸ್ಲೈಫ್ನಲ್ಲಿ ಡಿಸೆಂಬರ್ ೪ರ ಮೊದಲು ನೋಂದಾಯಿಸಬೇಕಾಗಿದೆ. (ಫೋನ್ : 2457192 , ವೆಬ್ಸೈಟ್ : www.rxlife.in). ಪ್ರತಿಸವಾರರಿಗೆ ಹಾಗೂ ಪ್ರತಿ ಸೈಕಲ್ಗೆ ಗುರುತು ಸಂಖ್ಯೆಯನ್ನು ನೀಡಲಾಗುವುದು. ಹತ್ತು ವರ್ಷ ಮೇಲ್ಪಟ್ಟ ಸೈಕಲ್ ಸವಾರಿ ಬಲ್ಲಯಾರೂ ಕೂಡ ಭಾಗವಹಿಸಬಹುದಾಗಿದೆ. ಕಳೆದ ಬಾರಿ 83 ವರ್ಷದ ಹಿರಿಯರು ಭಾಗವಹಿಸಿದ್ದರು.
ಕನ್ನಡಿಗ ವರ್ಲ್ಡ್ ಛಾಯಾಚಿತ್ರ ಸ್ಪರ್ಧೆ : ರ್ಯಾಲಿಯ ಫೋಟೋ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ವಿಷಯ : `ಸಮೂಹ ಸವಾರಿ (ರೈಡಿಂಗ್ ಟುಗೆದರ್)’. ಇದರಲ್ಲಿ ಎಲ್ಲರೂ ಭಾಗವಹಿಸಬಹುದು. ಚಿತ್ರವನ್ನು ರ್ಯಾಲಿಯಸಮಯದಲ್ಲಿ ಸೆರೆಹಿಡಿಯಬೇಕು. ಒಬ್ಬರು ೩ ಫೋಟೊವನ್ನು ಕಳಿಸಬಹುದು.
ಕಳಿಸಬೇಕಾದ ವಿಳಾಸ : svastirxlife@gmail.com, ಡಿಸೆಂಬರ್ 10ರ ಒಳಗೆ ಕಳುಹಿಸಬೇಕು. ಇದಕ್ಕೆ ಯಾವುದೇಪ್ರವೇಶ ಶುಲ್ಕವಿಲ್ಲ. ಆಯ್ದ ಫೊಟೊಗಳಿಗೆ 3 ಬಹುಮಾನಗಳನ್ನು (ರೂ. 3000, 2000, 1000) ನೀಡಲಾಗುವುದು ಎಂದು ಸ್ವಸ್ತಿ ಆರ್ ಎಕ್ಸ್ ಲೈಫ್ ಟ್ರಸ್ಟ್ ಪ್ರಮುಖರಾದ ಗಾಯತ್ರಿ ಭಟ್ ಮತ್ತು ವಂದನಾ ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.