ಮಂಗಳೂರು : ಸಂತ ಅಲೋಶಿಯಸ್ ಕಾಲೇಜಿನಇಂಗ್ಲೀಷ್ ವಿಭಾಗದ ವತಿಯಿಂದ 2 ದಿಗಳ ಲಿಟ್ರೇಚರ್ಆಟ್ದಕ್ರಾಸ್ರೋಡ್ಸ್ ಎಂಬ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಸೋಮವಾರ ಕಾಲೇಜಿನಎರಿಕ್ ಮಥಾಯಸ್ ಸಭಾಂಗಣದಲ್ಲಿ ಉದ್ಘಾಟನೆಗೊಂಡಿತು.
ಮಂಗಳೂರು ವಿಶ್ವವಿದ್ಯಾನಿಲಯದ ಇಂಗ್ಲೀಷ್ ವಿಭಾಗದ ಪ್ರಾಧ್ಯಾಪಕಡಾ.ಆರ್ ಶಶಿಧರ್ರವರು ಪ್ರಾಸ್ತಾವಿಕ ಮಾತುಗಳನ್ನಾಡಿ, 2ನೆ ಮಹಾಯುದ್ಧದ ಬಳಿಕ ಜನರ ನಡುವೆ ಸಾಂಸ್ಕೃತಿಕ ಭಾಷೆಯ ಆಯಾಮಗಳನ್ನು ಪ್ರಶ್ನಿಸುವ ವರ್ಗವೊಂದು ಹುಟ್ಟಿಕೊಂಡಿತು. ಭ್ರಾತೃತ್ವದಕೊರತೆಯಿಂದ ಇಂದು ಭಾಷೆಯು ಜನರ ನಡುವೆಗೊಂದಲವನ್ನು ಉಂಟು ಮಾಡುತ್ತಿದೆ ಎಂದರು.
ಕಾಸರಗೋಡು ಕೇಂದ್ರೀಯ ವಿಶ್ವವಿದ್ಯಾನಿಲಯದಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕಡಾ| ಪ್ರಸಾದ್ ಪನಿಯನ್, ಮಣಿಪಾಲ್ ಸೆಂಟರ್ಆಫ್ ಫಿಲಾಸಫಿಆಂಡ್ ಹ್ಯುಮಾನಿಟೀಸ್ನ ಸಹಾಯಕ ಪ್ರಾಧ್ಯಾಪಕಡಾ| ಗಾಯತ್ರಿ ಪ್ರಭು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.
ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ರೆ.ಫಾ.ಸ್ವೀಬರ್ಟ್ ಡಿಸಿಲ್ವ ಎಸ್.ಜೆ. ಮಾತನಾಡಿ, ಬದುಕಿನಲ್ಲಿ ಯಶಸ್ಸು ಸಾಧಿಸಬೇಕಾದರೆ ಕಠಿಣ ಪರಿಶ್ರಮ ಅಗತ್ಯ.ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಇಂಗ್ಲಿಷ್ ಭಾಷೆಯು ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಇಂಗ್ಲಿಷ್ ಭಾಷೆಯ ಕುರಿತ ಜ್ಞಾನ ಸಂಪಾದನೆ ಅತ್ಯಗತ್ಯ ಎಂದರು.
ಈ ಸಂದರ್ಭ ವಿಚಾರಸಂಕಿರಣದ ಆಯೋಜಕ ರತನ್ ಮೊಹಂತ, ನಿರ್ವಹಣಾ ಕಾರ್ಯದರ್ಶಿ ಸೆವೆರಿನ್ ಪಿಂಟೊ ಉಪಸ್ಥಿತರಿದ್ದರು. ಕಲಾವಿಭಾಗದ ಡೀನ್ ಡಾ.ಆಲ್ವಿನ್ಡೇಸಾ ಸ್ವಾಗತಿಸಿ, ವಂದಿಸಿದರು.
ಕಾರ್ಯಕ್ರಮದ ನಂತರ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಸಂಶೋಧನಾ ಪ್ರಬಂಧಗಳ ಮಂಡನೆಗಳಿಗೆ ಅವಕಾಶ ಕಲ್ಪಿಸಲಾಯಿತು.ಈ ವಿಚಾರ ಸಂಕಿರಣ ಡಿ.1ರಂದು ಮಂಗಳವಾರ ಅಪರಾಹ್ನ 3 ಗಂಟೆಗೆ ಸಮಾರೋಪಗೊಳ್ಳಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.