News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮದ್ಯಪಾನದ ಬಳಕೆ ಮಾಡುತ್ತಿರುವುದು ಅಪಾಯಕಾರಿ- ಡಾ|ಡಿ.ವೀರೇಂದ್ರ ಹೆಗ್ಗಡೆ

ಬೆಳ್ತಂಗಡಿ : ದುಃಖ ಶಮನಮಾಡಲು, ಸಂತೋಷ ಆಚರಿಸಲು ಮದ್ಯಪಾನದ ಬಳಕೆ ಮಾಡುತ್ತಿರುವುದು ಅಪಾಯಕಾರಿಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆಅವರು ಹೇಳಿದರು.ಅವರುಕನ್ಯಾಡಿಯ ಶ್ರೀ ಕ್ಷೇತ್ರ ಧರ್ಮಸ್ಥಳದ ಸ್ವಾಮಿ ಕೃಪಾ ಕಲ್ಯಾಣ ಮಂಟಪದಲ್ಲಿ ನಡೆದ 55ನೇ ವಿಶೇಷ ಮದ್ಯವರ್ಜನ ಶಿಬಿರದಲ್ಲಿ ಶಿಬಿರಾರ್ಥಿಗಳನ್ನು ಆಶೀರ್ವದಿಸಿದರು.

13madyavarjana

ಯಾವುದೇ ವ್ಯಸನಿ ದುಷ್ಟರಲ್ಲ, ಪಾಪಿಗಳಲ್ಲ. ಅವರಿಂದ ಪದೇ ಪದೇ ದುಷ್ಕೃತ್ಯಗಳು, ಅಶಾಂತಿ, ಜಗಳ, ಹಿಂಸೆ, ನಷ್ಟ ಬಂದಾಗಕುಟುಂಬದಲ್ಲಿ ವ್ಯಸನಿಗೆ ಸ್ಥಾನವಿರುವುದಿಲ್ಲ. ದುಃಖ ಮತ್ತು ಸಂತೋಷಕ್ಕೂ, ನಷ್ಟ ಮತ್ತು ಲಾಭಕ್ಕೂ ಮದ್ಯಪಾನವನ್ನುಜನ ಬಳಸುತ್ತಾರೆ.ಮದ್ಯವರ್ಜಿಸಿದವರು ಹೊಸ ಬದುಕನ್ನು ಪಡೆದುಕುಟುಂಬಕ್ಕೆ, ಸಮಾಜಕ್ಕೆಆದರ್ಶವಾಗಿರಬೇಕುಎಂದರು.

ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್.ಮಂಜುನಾಥ್‌ಅವರು ಅನಿಶ್ಚಿತವಾದ ಬದುಕಿನಲ್ಲಿ ನಿಶ್ಚಿತವಾದ ಬದುಕು ರೂಪಿಸುವುದೇ ಮದ್ಯವರ್ಜನ ಶಿಬಿರದ ಉದ್ದೇಶವಾಗಿದೆ. ಕುಡಿತ ಬಿಡಲುದೇವರದಾರಿ ಹುಡುಕಬೇಕು ದೇವರನ್ನು ಅನುಸರಿಸಬೇಕು ಗುರಿಸಾದನೆ ಮತ್ತು ಸವಾಲುಗಳನ್ನು ಎದುರಿಸುವುದರ ಮೂಲಕ ಜವಾಬ್ದಾರಿಯುತ ಜೀವನ ನಡೆಸಬೇಕು ಎಂದರು.

ಎಂಟು ದಿನಗಳ ಕಾಲ ನಡೆದ ಶಿಬಿರದಲ್ಲಿ ಕರ್ನಾಟಕರಾಜ್ಯದ ವಿವಿದೆಡೆಗಳಿಂದ 56 ಮಂದಿ ಶಿಬಿರಾರ್ಥಿಗಳು ಮದ್ಯವರ್ಜನೆಯ ಚಿಕಿತ್ಸೆ ಪಡೆದರು. ಶಿಬಿರವನ್ನು ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ, ಜನಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷರಾದ ಸತೀಶ್ ಹೊನ್ನವಳ್ಳಿ, ಪ್ರಾದೇಶಿಕ ನಿರ್ದೇಶಕರಾದ ಶ್ರೀಹರಿ, ಅನ್ನಛತ್ರದ ವ್ಯವಸ್ಥಾಪಕ ಸುಬ್ರಹ್ಮಣ್ಯ ಪ್ರಸಾದ್, ಜಗದೀಶ್ ಶೆಟ್ಟಿ, ಡಿ.ಎ.ರಹಿಮಾನ್, ಡಾ.ಶ್ರೀನಿವಾಸ್ ಭಟ್, ಸುಮನಾ ಪಿಂಟೋ, ಪ್ರತಾಪ್ ಸಿಂಹ ನಾಯಕ್, ಬೆಳಾಲು ತಿಮ್ಮಪ್ಪಗೌಡ, ಅಡೂರು ವೆಂಕಟ್ರಾಯ, ಕೆ.ವಸಂತ್ ಸಾಲ್ಯಾನ್, ಡಾ.ಮೋಹನ್‌ದಾಸ್‌ಗೌಡ, ವಲಯಾಧ್ಯಕ್ಷರಾದ ಪ್ರವೀಣ್, ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.

ನಿರ್ದೇಶಕ ವಿವೇಕ್ ವಿ ಪಾಸ್, ಯೋಜನಾಧಿಕಾರಿತಿಮ್ಮಯ್ಯ ನಾಯ್ಕ, ಶಿಬಿರಾಧಿಕಾರಿ ಭಾಸ್ಕರ್.ಎನ್, ಆರೋಗ್ಯ ಸಹಾಯಕಿಚಿತ್ರಾರವರು ಶಿಬಿರವನ್ನು ನಿರ್ವಹಿಸಿದರು. ಮುಂದಿನ ಶಿಬಿರ ನವೆಂಬರ್ 2 ರಂದು ಆರಂಭವಾಗಲಿದೆ ಎಂದು ಜನಜಾಗೃತಿ ವೇದಿಕೆ ಪ್ರಕಟನೆಯಲ್ಲಿ ತಿಳಿಸಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top