ಮಂಗಳೂರು : ಎತ್ತಿನಹೊಳೆ ಅವೈಜ್ಞಾನಿಕ ಯೋಜನೆಯಾಗಿದ್ದು ಈ ಯೋಜನೆಯಿಂದ ಯಾರಿಗೂ ಲಾಭವಾಗುದಿಲ್ಲ. ಹೋರಾಟದಲ್ಲಿ 25000 ಕ್ಕಿಂತಲೂ ಹೆಚ್ಚು ಜನ ಭಾಗವಹಿಸಿದ್ದಾರೆ. ಮಾತ್ರವಲ್ಲ 25000ಕ್ಕಿಂತ ಹೆಚ್ಚುಜನ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಪ್ರತಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಮಾಹಾತ್ಮಾ ಗಾಂಧಿ ಮತ್ತು ನಾರಾಯಣ ಗುರು ಪ್ರತಿಮೆಗಳಿಗೆ ಹಾರಾರ್ಪಣೆಮಾಡಿ ಗಾಂಧಿಜಿ ಹೇಳಿದಂತೆ ಅಹಿಂಸಾತ್ಮಕ ಹೋರಾಟವನ್ನು ಹಮ್ಮಿಕೊಂಡಿದ್ದೇವು. ನಮ್ಮುನ್ನು ಬಂಧಿಸುವ ಮೂಲಕ ಸರಕಾರ ಗಾಂಧಿ ತತ್ವಗಳ ಕೊಲೆಮಾಡಿದಂತಾಗಿದೆ. ಸರಕಾರ ಹೋರಾಟಕ್ಕೆ ಬೆದರಿದೆ. ಆದುದರಿಂದ ನಮ್ಮ ಹೋರಾಟವನ್ನು ಹತ್ತಿಕುವ ಕೆಲಸ ನಡೆಸುತ್ತಿದೆ. ನಾವು ಬಂಧನ ಭೀತಿಯಿಂದ ಹೋರಾಟ ನಿಲ್ಲಿಸುತ್ತೇವೆ ಎಂದಿದ್ದರೆ ಅದು ನಡೆಯದು. ನಮ್ಮ ಹೋರಾಟಕ್ಕೆ ಇನ್ನೂ ಶಕ್ತಿ ಮತ್ತು ಹುರುಪು ತಂಬಿದಂತಾಗಿದೆ ಎಂದರು.
ನಾವು ಬಯಲುಸೀಮೆ ಮತ್ತು ಕೋಲಾರಕ್ಕೆ ನೀರು ಬಿಡಲು ವಿರೋಧಿಸಲ್ಲ ಸರಕಾರ ಬೇಕಾದರೆ ಪ್ರರ್ಯಾಯ ಯೋಜನೆ ರೂಪಿಸಿದರೆ ನಾವು ಅದಕ್ಕೆ ಬೆಂಬಲ ನೀಡುತ್ತೇವೆ. ಈ ಯೋಜನೆಗೆ 13.5 ಸಾವಿರ ಕೋಟಿ ತಗುಲಲಿದ್ದು ಈ ಹಣದ ಲೂಟಿಯಾಗಲಿದೆ. ಅಲ್ಲದೆ ಕೋಲಾರ ಹಾಗೂ ಬಯಲು ಸೀಮೆಯ ಜನ ನಮ್ಮ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ ಎಂದರು.
ಅ.15 ಪಂಪ್ವೆಲ್ ಬಂದ್ನಲ್ಲಿ ನಾನು ಭಾಗವಹಿಸುತ್ತಿನೆ ಸಂಸದನಾಗಿ ಭಾಗವಹಿಸಿ ಬೆಂಬಲ ನೀಡುತ್ತೇನೆ. ನಾನು ಎತ್ತಿನಹೊಳೆ ಹೋರಾಟದಲ್ಲಿ ಭಾಗವಹಿಸುವಂತೆ ಯಾವ ಸಂಘಟನೆ ಕೇಳಿ ಕೊಂಡರೂ ನಾನು ಭಾಗವಹಿಸುತ್ತೇನೆ. ಆದರೆ ನಾನು ಅಲ್ಲಿ ಭಾಷಣವನ್ನು ಮಾಡುದಿಲ್ಲ. ನಾನು ಭಾಷಣ ಮಾಡುದರಿಂದ ಹೋರಾಟ ರಾಜಕೀಯದ ಬಣ್ಣ ಪಡೆದುಕೊಳ್ಳಬಾರದು ಎಂಬುದು ನನ್ನ ಆಶಯ ಎಂದರು. ಅಲ್ಲದೇ ಅ.15 ಪಂಪ್ವೆಲ್ ಬಂದ್ನಲ್ಲಿ ಪಕ್ಷದ ಕಾರ್ಯಕರ್ತರು ಪಕ್ಷ ಧ್ವಜ ಮತ್ತು ಘೋಷಣೆಯನ್ನು ಕುಗುದಿಲ್ಲ ಎಂದು ಹೇಳಿದರು .
ಪ್ರಶಾಂತ್ ಕೊಲೆ ಪ್ರಕರಣ ಪೊಲೀಸ್ ಇಲಾಖೆಗೆ ಗಡುವು : ಪೊಲೀಸ್ ಇಲಾಖೆಯು ಪ್ರಕರಣವನ್ನು ಭೇದಿಸುವಲ್ಲಿ ವಿಫಲವಾಗಿದ್ದು ಅ.16 ನಂತರ ಹೋರಾಟ ಆರಂಭವಾಲಿದೆ. ಇದರ ಹಿಂದೆ ಕಾಂಗ್ರೇಸ್ ಬೆಂಬಲವಿರಬಹುದು ಎಂದು ಸಾರ್ವಜನಿಕರು ಮಾತನಾಡುವ ಮುನ್ನ ಉಸ್ತುವಾರಿ ಸಚಿವರು ಕ್ರಮಕೈಗೊಳ್ಳುವಂತೆ ಇಲಾಖೆಗೆ ಚುರುಕುಗೊಳಿಸಲಿ ಮತ್ತು 25 ಲಕ್ಷ ಪರಿಹಾರವನ್ನು ನೀಡಲಿ. ಈ ಹಿಂದೆ ಪೊಲೀಸ್ ಇಲಾಖೆ ಕ್ರಮಕೈಗೊಂಡಿದ್ದರೆ ಇಂತಹ ಘಟನೆಗಳನ್ನು ತಪ್ಪಿಸಬಹುದಿತ್ತು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಪ್ರತಾಪ್ಸಿಂಹ ನಾಯಕ್ ಮಾತನಾಡುತ್ತಾ ನಮಗೆ ಸಾರ್ವಜನಿಕರಿಂದ ಅಭೂತಪೂರ್ವ ಬೆಂಬಲ ದೊರೆತಿದ್ದು ಅನೇಕ ಸಲಹೆಗಳು ಬಂದಿವೆ. ಅದಕ್ಕೆ ನಾವು ಧನ್ಯವಾದಗಳನ್ನು ಸಮರ್ಪಿಸುತ್ತಿದ್ದೇನೆ. ಬಿಜೆಪಿ ಬೆಂಬಲಿತ ಎಲ್ಲ ಜಿ.ಪಂ. ಮತ್ತು ಗ್ರಾ.ಪಂ.ನಲ್ಲಿ ಈ ಯೋಜನೆ ವಿರುದ್ಧ ನಿರ್ಣಯಗಳನ್ನು ಕೈಗೊಳ್ಳುವಂತೆ ಸೂಚಿಸಿದರು. ಜನರು ಸ್ವಯಂಪ್ರೇರಿತವಾಗಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದು ಸಚಿವರು ಮತ್ತು ಉಸ್ತುವಾರಿ ಸಚಿವರು ವಿರೋಧ ವ್ಯಕ್ತಪಡೆಸುತ್ತಿದ್ದು ಅವರಿಗೆ ನಾವು ಬೆಂಬಲವಾಗಿ ಹೋರಾಟ ನಡೆಸುತ್ತಿದ್ದೇವೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.