ಉಡುಪಿ: ವಿಜಯದಶಮಿಯ ಈ ವಿಶೇಷ ಸಂದರ್ಭದಲ್ಲಿ ಗ್ರೀನ್ಸೋಲ್ ಸಂಸ್ಥೆ ‘ನಡಿಗೆ’ ಎಂಬ ವಿಶೇಷ ಅಭಿಯಾನವನ್ನು ಆರಂಭಿಸುತ್ತಿದೆ. ನವೆಂಬರ್ 30 ರಿಂದ ಡಿಸೆಂಬರ್ 2 ರವರೆಗೆ ಉಡುಪಿ ಎಂಜಿಎಂ ಕಾಲೇಜಿನಲ್ಲಿ ನಡೆಯುವ ಬೃಹತ್ ಚಪ್ಪಲಿ ಸಂಗ್ರಹ ಅಭಿಯಾನದಲ್ಲಿ ಜನರು ತಮ್ಮ ಪಾದರಕ್ಷೆಗಳನ್ನು ದಾನ ಮಾಡಬಹುದು.
ಹಳೆ ಚಪ್ಪಲಿಗಳನ್ನು ಜನರಿಂದ ಸಂಗ್ರಹಿಸಿ ಅವುಗಳಿಗೆ ಹೊಸ ರೂಪ ನೀಡಿ ದೇಶವ್ಯಾಪಿಯ ಅಶಕ್ತರಿಗೆ, ಬಡವರಿಗೆ ಹಂಚುವುದು ಈ ಅಭಿಯಾನದ ಉದ್ದೇಶವಾಗಿದೆ.
ಅಭಿಯಾನದಡಿ ಸುಸ್ಥಿತಿಯಲ್ಲಿರುವ ಯಾವುದೇ ಪಾದರಕ್ಷೆಯನ್ನು ದಾನದ ರೂಪದಲ್ಲಿ ನೀಡಬಹುದು. High Heels, Pointed Heels, 10 ವರ್ಷದ ಒಳಗಿನ ಮಕ್ಕಳ ಪಾದರಕ್ಷೆಗಳನ್ನು ಸ್ವೀಕರಿಸಲಾಗುವುದಿಲ್ಲ.
ಸಂಗ್ರಹಿಸಿದ ಎಲ್ಲಾ ಚಪ್ಪಲಿಗಳನ್ನು ಪ್ರತಿಷ್ಠಿತ Greensole ಸಂಸ್ಥೆಗೆ ನೀಡಲಾಗುತ್ತದೆ. ಅವರು ಇದರಿಂದ ಹೊಸ ಚಪ್ಪಲಿಗಳನ್ನು ತಯಾರಿಸಿ ದೇಶದಾದ್ಯಂತ ಅಶಕ್ತರಿಗೆ, ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಹಂಚುತ್ತಾರೆ. ಈ ಅಪರೂಪದ ಕೆಲಸವನ್ನು Greensole Foundation ಮಾಡುತ್ತಿದೆ.
ಈ ಅಭಿಯಾನ ಕರಾವಳಿ ಕರ್ನಾಟಕದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವುದು ವಿಶೇಷ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.