ನವದೆಹಲಿ: ಸನಾತನ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ ವಿರುದ್ಧ ಬಿಜೆಪಿ ತನ್ನ ದಾಳಿಯನ್ನು ತೀವ್ರಗೊಳಿಸಿದೆ. ಉದಯನಿಧಿಯವರು ಸನಾತನ ಧರ್ಮವನ್ನು “ಮಲೇರಿಯಾ ಮತ್ತು ಡೆಂಗ್ಯೂ” ದಂತಹ ರೋಗಗಳಿಗೆ ಹೋಲಿಸಿದರೆ ಬಿಜೆಪಿ ಡಿಎಂಕೆ ನಾಯಕನನ್ನು “ಹಿಟ್ಲರ್” ನೊಂದಿಗೆ ಸಮೀಕರಿಸಿ. ಅಲ್ಲದೇ ಉದಯನಿಧಿ ಮತ್ತು ಜರ್ಮನಿಯ ಸರ್ವಾಧಿಕಾರಿಯ ನಡುವೆ ಇರುವ ಕೆಲವು ಹೋಲಿಕೆಯನ್ನು ಜನರ ಮುಂದಿಟ್ಟಿದೆ.
ಕೆಲವು ಸಾಮ್ಯತೆಗಳೊಂದಿಗೆ ಉದಯನಿಧಿ ಮತ್ತು ಹಿಟ್ಲರ್ ಬಗೆಗಿನ ಪೋಸ್ಟರ್ ಅನ್ನು ಹಂಚಿಕೊಂಡಿರುವ ಬಿಜೆಪಿ, “ಹಿಟ್ಲರ್ ಯಹೂದಿಗಳನ್ನು ಹೇಗೆ ನಿರೂಪಿಸಿದ್ದಾನೆ ಮತ್ತು ಉದಯನಿಧಿ ಸ್ಟಾಲಿನ್ ಸನಾತನ ಧರ್ಮವನ್ನು ಹೇಗೆ ವಿವರಿಸಿದ್ದಾನೆ ಎಂಬುದರ ನಡುವೆ ವಿಲಕ್ಷಣ ಹೋಲಿಕೆಯಿದೆ. ಹಿಟ್ಲರ್ನಂತೆ ಸ್ಟಾಲಿನ್ ಜೂನಿಯರ್ ಕೂಡ ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕೆಂದು ಒತ್ತಾಯಿಸಿದ್ದಾನೆ” ಎಂದಿದ್ದಾರೆ.
“ನಾಝಿ ದ್ವೇಷವು ಹತ್ಯಾಕಾಂಡಕ್ಕೆ ಹೇಗೆ ಪ್ರೇರಕವಾಯಿತು, ಸರಿಸುಮಾರು 6 ಮಿಲಿಯನ್ ಯುರೋಪಿಯನ್ ಯಹೂದಿಗಳು ಮತ್ತು ಕನಿಷ್ಠ 5 ಮಿಲಿಯನ್ ಸೋವಿಯತ್ ಯುದ್ಧ ಕೈದಿಗಳು ಮತ್ತು ಇತರ ಬಲಿಪಶುಗಳನ್ನು ಕೊಂದಿರುವ ಬಗ್ಗೆ ನಮಗೆ ತಿಳಿದೇ ಇದೆ” ಎಂದು ಬಿಜೆಪಿ ಹೇಳಿದೆ.
There is eerie similarity between how Hitler characterised the Jews and Udhayanidhi Stalin described Sanatan Dharma. Like Hitler, Stalin Jr also demanded, that Sanatan Dharma be eradicated… We know how Nazi hate culminated in Holocaust, killing approx 6 million European Jews and… pic.twitter.com/bu1MNWGq6Z
— BJP (@BJP4India) September 5, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.