ನವದೆಹಲಿ: ಚಂದ್ರಯಾನ-2 ಹಿನ್ನಡೆಯಿಂದ ಜರ್ಜರಿತರಾಗಿದ್ದ ಇಸ್ರೋದ ಮಾಜಿ ಮುಖ್ಯಸ್ಥ ಕೆ.ಶಿವನ್ ಅವರು ನಿನ್ನೆ ಸಂಜೆ ಚಂದ್ರನ ಮೇಲ್ಮೈಯಲ್ಲಿ ಚಂದ್ರಯಾನ-3 ಸ್ಪರ್ಶಿಸಿದಾಗ ಭಾವಪರವಶರಾಗಿದ್ದರು. ಈ ಐತಿಹಾಸಿಕ ಕ್ಷಣದ ಸಂದರ್ಭದಲ್ಲಿ 1.4 ಶತಕೋಟಿ ಭಾರತೀಯರ ಜೊತೆಗೂಡಿ ಅವರೂ ಸಂಭ್ರಮಿಸಿದರು.
ತಮ್ಮ ಅನಿಸಿಕೆಯನ್ನು ಇಂದು ಹಂಚಿಕೊಂಡ ಶಿವನ್, ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈಯಲ್ಲಿ ಇಳಿದಾಗ ಇಸ್ರೋ ನಿಯಂತ್ರಣ ಕೊಠಡಿಯೊಳಗೆ ಇದ್ದ ಸಂತೋಷ ಮತ್ತು ಉತ್ಸಾಹವನ್ನು ವ್ಯಕ್ತಪಡಿಸಿದರು.
“ಕೊನೆಗೂ ನಮ್ಮ ಪ್ರಾರ್ಥನೆ ಫಲಿಸಿತು. ಲ್ಯಾಂಡಿಂಗ್ ಆದ ನಂತರ ನಾವು ಮನೆಗೆ ವಾಪಾಸ್ ಬರಲಿಲ್ಲ. ಲ್ಯಾಂಡರ್ನಿಂದ ರೋವರ್ ಹೊರಬರುವವರೆಗೆ ನಾನು ನಿಯಂತ್ರಣ ಕೊಠಡಿಯಲ್ಲಿ ಕುಳಿತಿದ್ದೆ. ಚಂದ್ರನ ಮೇಲ್ಮೈಯಲ್ಲಿ ರೋವರ್ ಚಲಿಸುವುದನ್ನು ನೋಡಿದ ನಂತರವೇ ನಾನು ಹೊರಟೆ. ತಡರಾತ್ರಿ ಮನೆಗೆ ಬಂದೆ” ಎಂದು ಹೇಳಿದರು.
ನಿನ್ನೆ ಸಂಜೆ ಯಶಸ್ವಿ ಲ್ಯಾಂಡಿಂಗ್ ನಂತರ ಮಾತನಾಡಿದ್ದ ಅವರು, “ಇದಕ್ಕಾಗಿ, ನಾವು ಕಳೆದ ನಾಲ್ಕು ವರ್ಷಗಳಿಂದ ಕಾಯುತ್ತಿದ್ದೇವೆ. ಈ ಯಶಸ್ಸು ನಮಗೆ ಮತ್ತು ಇಡೀ ರಾಷ್ಟ್ರಕ್ಕೆ ಸಿಹಿ ಸುದ್ದಿಯಾಗಿದೆ” ಎಂದರು.
2019 ರಲ್ಲಿ ಚಂದ್ರಯಾನ-2 ದಕ್ಷಿಣ ಧ್ರುವದ ಬಳಿ ಚಂದ್ರನನ್ನು ಇಳಿಯಲು ಪ್ರಯತ್ನಿಸಿದಾಗ ಶಿವನ್ ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಚುಕ್ಕಾಣಿ ಹಿಡಿದಿದ್ದರು. ಬಾಹ್ಯಾಕಾಶ ನೌಕೆಯನ್ನು ಜುಲೈ 22 ರಂದು ಉಡಾವಣೆ ಮಾಡಲಾಯಿತು ಮತ್ತು ಸೆಪ್ಟೆಂಬರ್ 6 ರಂದು ಇಳಿಯಲು ನಿರ್ಧರಿಸಲಾಗಿತ್ತು. ಲ್ಯಾಂಡಿಂಗ್ ಪ್ರಯತ್ನದ ಸಮಯದಲ್ಲಿ, ಲ್ಯಾಂಡರ್ ವಿಚಲನಗೊಂಡಿತು. ಯೋಜಿತ ಪಥದಿಂದ ಮಿಷನ್ ನಿಯಂತ್ರಣ ಕೊಠಡಿಯ ಸಂಪರ್ಕವನ್ನು ಕಳೆದುಕೊಂಡಿತು ಮತ್ತು ಚಂದ್ರನ ಮೇಲ್ಮೈಯಲ್ಲಿ ಕ್ರ್ಯಾಶ್ ಲ್ಯಾಂಡಿಂಗ್ ಮಾಡಿತು. ಆ ಸಂದರ್ಭದಲ್ಲಿ ಶಿವನ್ ಕಣ್ಣೀರು ಹರಿಸಿದ್ದರು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಾಂತ್ವನ ಹೇಳಿದ್ದರು.
#WATCH | #Chandrayaan3 | "…Finally our prayers came true. After landing we did not come back, I was still sitting in the control room till the rover came out of the lander. Only after seeing that the rover came out of the lander and moved over the surface of the moon, I came… pic.twitter.com/jFUXbXu9pN
— ANI (@ANI) August 24, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.