ಲಕ್ನೋ: ಯುಪಿಯಲ್ಲಿ ಎಲ್ಲಾ 80 ಲೋಕಸಭಾ ಸ್ಥಾನಗಳನ್ನು ಬಿಜೆಪಿಗೆ ನೀಡುವ ಸಂಕಲ್ಪ ಮಾಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಉತ್ತರಪ್ರದೇಶದ ಜನರಿಗೆ ಕರೆ ನೀಡಿದ್ದಾರೆ.
ಅಲಿಘರ್ನ ನುಮಾಯಿಶ್ ಮೈದಾನದಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಅವರ ಪುಣ್ಯತಿಥಿಯ ಸ್ಮರಣಾರ್ಥ ನಡೆದ ʼಹಿಂದೂ ಗೌರವ್ ದಿವಸ್ʼ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ”ನಮ್ಮ ಹಿರಿಯ ಬಿಜೆಪಿ ನಾಯಕ, ರಾಮಭಕ್ತ ಮತ್ತು ಉತ್ತರ ಪ್ರದೇಶದಲ್ಲಿ ಹಿಂದುಳಿದವರ ಉನ್ನತಿಗೆ ಚಾಲನೆ ನೀಡಿದ ಕಲ್ಯಾಣ್ ಸಿಂಗ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ನಾನು ದೆಹಲಿಯಿಂದ ಇಲ್ಲಿಗೆ ಬಂದಿದ್ದೇನೆ” ಎಂದರು.
2024 ರ ಆರಂಭದಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ 550 ವರ್ಷಗಳ ನಂತರ ಭಗವಾನ್ ರಾಮನು ತನ್ನ ಭವ್ಯವಾದ ದೇವಾಲಯದಲ್ಲಿ ನೆಲಸಲಿದ್ದಾನೆ. ಆ ದಿನ, ರಾಮನ ಭಕ್ತರಲ್ಲಿ ಸಂತೃಪ್ತಿಯ ಭಾವನೆ ಇರುತ್ತದೆ ಎಂದಿದ್ದಾರೆ.
“ಬಾಬುಜಿ (ಕಲ್ಯಾಣ್ ಸಿಂಗ್) ಯುಪಿ ಮುಖ್ಯಮಂತ್ರಿಯಾದಾಗ, ಅವರು ಮೂರು ಗುರಿಗಳನ್ನು ಹೊಂದಿದ್ದರು – ರಾಮ ಜನ್ಮಭೂಮಿ ಆಂದೋಲನವನ್ನು ವೇಗಗೊಳಿಸುವುದು, ಬಡವರ ಉನ್ನತಿ ಮತ್ತು ಸಾಮಾಜಿಕ ಸಾಮರಸ್ಯವನ್ನು ಕದಡದಂತೆ ಕೋಟ್ಯಂತರ ಹಿಂದುಳಿದ ಜನರ ಕಲ್ಯಾಣದ ಬಿಜೆಪಿಯ ಕಲ್ಪನೆಯನ್ನು ಕಾರ್ಯಗತಗೊಳಿಸುವುದು. ಪ್ರಧಾನಿ ಮೋದಿ ಅವರು ಮೂರೂ ಕೆಲಸಗಳನ್ನು ಮುಂದಕ್ಕೆ ಕೊಂಡೊಯ್ಯುತ್ತಿರುವುದು ನನಗೆ ಖುಷಿ ತಂದಿದೆ ಎಂದು ಅಮಿತ್ ಶಾ ಹೇಳಿದ್ದಾರೆ.
VIDEO | "Raise your hands and say 'Bharat Mata Ki Jai' with a resolve to give all 80 (Lok Sabha) seats in UP to the BJP," says Union Home minister @AmitShah in his address at 'Hindu Gaurav Diwas', being held in Aligarh to commemorate the second death anniversary of former CM… pic.twitter.com/1HeG0g72VJ
— Press Trust of India (@PTI_News) August 21, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.