ಭೋಪಾಲ್: ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಸಂತ ಶಿರೋಮಣಿ ಗುರುದೇವ್ ರವಿದಾಸ್ ಸ್ಮಾರಕಕ್ಕೆ ಪ್ರಧಾನಿ ನರೇಂದ್ರ ಮೋದಿ ಇಂದು ಶಂಕುಸ್ಥಾಪನೆ ನೆರವೇರಿಸಿದರು. ಬಳಿಕ ಮಾತನಾಡಿದ ಮೋದಿ, ಸಂತರ ಆಶೀರ್ವಾದದಿಂದ ಈ ಪವಿತ್ರ ಸ್ಮಾರಕದ ಶಂಕುಸ್ಥಾಪನೆ ಮಾಡುವ ಭಾಗ್ಯ ನನಗೆ ಸಿಕ್ಕಿದ್ದು, ಇದರಿಂದ ನನ್ನ ಸಂಸತ ದುಪ್ಪಟ್ಟು ಆಗಿದೆ ಎಂದರು.
ಆಧ್ಯಾತ್ಮ ಕವಿ ಮತ್ತು ಸಮಾಜ ಸುಧಾರಕ ಸಂತ ರವಿದಾಸ್ ಅವರ ದೇಗುಲವನ್ನು ಸುಮಾರು 100 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತದೆ. ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ರಾಜ್ಯಪಾಲ ಮಂಗುಭಾಯ್ ಪಟೇಲ್ ಮತ್ತು ಕೇಂದ್ರ ಸಚಿವ ವೀರೇಂದ್ರ ಕುಮಾರ್ ಅವರ ಸಮ್ಮುಖದಲ್ಲಿ ಪ್ರಧಾನಿ ಮೋದಿ ಅವರು ‘ಭೂಮಿ ಪೂಜೆ’ ನೆರವೇರಿಸಿದರು ಮತ್ತು ಬದ್ತುಮಾ ಗ್ರಾಮದಲ್ಲಿ ಶಂಕುಸ್ಥಾಪನೆ ಮಾಡಿದರು.
ನರೇಂದ್ರ ಮೋದಿ ಅವರು ಸಂತ ರವಿದಾಸ್ ಅವರ ಮೂರ್ತಿಯ ಮುಂದೆ ಕೈಮುಗಿದು ನಮಿಸಿದರು. ಈ ಸಮಾರಂಭದಲ್ಲಿ ಮುಂಬರುವ ಸ್ಮಾರಕ-ದೇವಾಲಯದ ಮಾದರಿಯನ್ನೂ ಪ್ರಧಾನಿ ಪರಿಶೀಲಿಸಿದರು.
प्रधानमंत्री श्री @narendramodi ने मध्य प्रदेश के सागर में संत शिरोमणि रविदास जी के भव्य मंदिर एवं स्मारक के निर्माण कार्य का भूमिपूजन किया। pic.twitter.com/kMi66lL0Pi
— BJP (@BJP4India) August 12, 2023
मध्य प्रदेश के सागर में संत रविदास जी के मंदिर तथा स्मारक के भूमिपूजन एवं अन्य विकास कार्यों के लिए राज्य के लोगों को कोटि-कोटि शुभकामनाएं। https://t.co/L8Iil0Fmc6
— Narendra Modi (@narendramodi) August 12, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.