ನವದೆಹಲಿ: ಭಾರತ ಮತ್ತು ನೇಪಾಳ ಕೊಡು ಮತ್ತು ಕೊಂಡುಕೊಳ್ಳುವಿಕೆಯ ತಂತ್ರ ಅಳವಡಿಸಿದೆ. ಪರಸ್ಪರ ದೇಶಗಳಲ್ಲಿ ಟೊಮ್ಯಾಟೊ ಮತ್ತು ಅಕ್ಕಿಯಂತಹ ಸರಕುಗಳ ಬೆಲೆಯಲ್ಲಿ ದಾಖಲೆಯ ಹೆಚ್ಚಳವಾಗುತ್ತಿರುವ ನಡುವೆ ಭಾರತ ಮತ್ತು ನೇಪಾಳ ಪರಸ್ಪರ ಸಹಾಯ ಮಾಡುತ್ತಿವೆ. ಏರುತ್ತಿರುವ ಬೆಲೆಗಳನ್ನು ಗಮನದಲ್ಲಿಟ್ಟುಕೊಂಡು, ಭಾರತವು ನೇಪಾಳದಿಂದ ಟೊಮೆಟೊಗಳನ್ನು ಆಮದು ಮಾಡಿಕೊಳ್ಳಲು ಪ್ರಾರಂಭಿಸಿದೆ, ಇನ್ನೊಂದೆಡೆ ನೇಪಾಳವು ಅಕ್ಕಿ ಮತ್ತು ಸಕ್ಕರೆಯನ್ನು ಕಳುಹಿಸುವ ಮೂಲಕ ತನಗೆ ಸಹಾಯವನ್ನು ಮಾಡುವಂತೆ ಭಾರತ ಸರ್ಕಾರಕ್ಕೆ ಪತ್ರ ಬರೆದಿದೆ.
ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯಕ್ಕೆ ಉತ್ತರಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ದೇಶಾದ್ಯಂತ ಬೆಳೆಯುತ್ತಿರುವ ಬೆಲೆಗಳ ನಡುವೆ ಭಾರತ ನೇಪಾಳದಿಂದ ಟೊಮ್ಯಾಟೊ ಆಮದು ಮಾಡಿಕೊಳ್ಳಲು ಪ್ರಾರಂಭಿಸಿದೆ ಎಂದು ತಿಳಿಸಿದರು. ನೇಪಾಳದಿಂದ ಮೊದಲ ಟೊಮೆಟೊ ಆಮದುಗಳು ವಾರಣಾಸಿ, ಲಕ್ನೋ ಮತ್ತು ಕಾನ್ಪುರ ಸೇರಿದಂತೆ ಉತ್ತರ ಭಾರತದ ನಗರಗಳನ್ನು ತಲುಪುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದರು.
ಇದರ ಜೊತೆಗೆ, NAFED ಮತ್ತು ಇತರ ಸಹಕಾರ ಸಂಘಗಳ ಮೂಲಕ ಪಶ್ಚಿಮ ಬಂಗಾಳ, ರಾಜಸ್ಥಾನ ಮಹಾರಾಷ್ಟ್ರ ಮತ್ತು ಕರ್ನಾಟಕದಿಂದ ಸರ್ಕಾರವು ಟೊಮ್ಯಾಟೋ ಖರೀದಿಸಿ ರಾಷ್ಟ್ರ ರಾಜಧಾನಿ, ಬಿಹಾರ, ಉತ್ತರ ಪ್ರದೇಶದಲ್ಲಿ ವಿತರಿಸುತ್ತಿರುವುದರಿಂದ ದೆಹಲಿ-ಎನ್ಸಿಆರ್ನಲ್ಲಿ ಟೊಮ್ಯಾಟೊ ಬೆಲೆ ಕೆಜಿಗೆ 70 ರೂ.ಗೆ ಇಳಿಯಲಿದೆ ಎಂದು ಕೇಂದ್ರ ಸಚಿವರು ಭರವಸೆ ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.