ಮುಂಬಯಿ: ʼವಂದೇ ಮಾತರಂ” ಗೀತೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಇಂದು ದೊಡ್ಡ ಮಟ್ಟದ ಗದ್ದಲ ಏರ್ಪಟ್ಟಿದೆ.
ಮಹಾರಾಷ್ಟ್ರದ ಮಾನ್ಸೂನ್ ಅಧಿವೇಶನ 2023 ರ ಮೂರನೇ ದಿನದ ಕಲಾಪದಲ್ಲಿ ಸಮಾಜವಾದಿ ಪಕ್ಷದ ಶಾಸಕ ಅಬು ಅಜ್ಮಿ ಅಸೆಂಬ್ಲಿಯಲ್ಲಿ ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ. ಅಜ್ಮಿ ಅವರು ‘ವಂದೇ ಭಾರತ್’ ಗೀತೆಯನ್ನು ಪಠಿಸಲು ನಿರಾಕರಿಸಿ ನನ್ನ ಧರ್ಮವು ಈ ಗೀತೆ ಹಾಡಲು ನನಗೆ ಅನುಮತಿಸುವುದಿಲ್ಲ ಎಂದು ಹೇಳಿದ್ದಾರೆ. ಅವರ ಈ ಧೋರಣೆಗೆ ವ್ಯಾಪಕವಾದ ಟೀಕೆಗಳು ವ್ಯಕ್ತವಾಗುತ್ತಿದೆ.
ಮಹಾರಾಷ್ಟ್ರ ವಿಧಾನಸಭೆಯಲ್ಲಿ ಅಬು ಅಜ್ಮಿ ಅವರು ರಾಷ್ಟ್ರೀಯ ಗೀತೆಯಾದ ‘ವಂದೇ ಮಾತರಂ’ ಅನ್ನು ಪಠಿಸುವುದಿಲ್ಲ ಎಂದು ಹೇಳಿದ್ದು ಅವರ ಮನಸ್ಥಿತಿಯನ್ನು ಪ್ರದರ್ಶಿಸುತ್ತದೆ. ಈ ಗೀತೆ ರಾಷ್ಟ್ರಕ್ಕೆ ತಾಯಿಯ ಗೌರವವನ್ನು ನೀಡಿ ನಮಸ್ಕರಿಸುತ್ತದೆ. ಆದರೆ ನನ್ನ ಧರ್ಮವು ಯಾರ ಮುಂದೆಯೂ ತಲೆಬಾಗಲು ಅವಕಾಶ ನೀಡುವುದಿಲ್ಲ ಎಂದು ಅಜ್ಮಿ ಹೇಳಿದ್ದಾರೆ. ತಾಯಿಗೂ ಕೂಡ ನಮಿಸಲು ಅವಕಾಶ ನೀಡದ ಎಂತಹ ಧರ್ಮ ಎಂದು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ.
ಅಜ್ಮಿ ಅವರ ಪಕ್ಷ ಎಸ್ಪಿಯು ಬಿಜೆಪಿ ವಿರುದ್ಧ ಕೈಜೋಡಿಸಿರುವ 26 ವಿವಿಧ ಪಕ್ಷಗಳನ್ನು ಒಳಗೊಂಡಿರುವ ಮೈತ್ರಿ INDIAದ ಭಾಗವಾಗಿದೆ.
हम वो है जिनके पूर्वजों ने इस देश के लिए अपनी जान दी, हम वो है जिन्होंने पाकिस्तान को नहीं भारत को अपना मुल्क माना। हमें इस्लाम सिखाता है की सर उसी के आगे झुकाओ जिसने ये सारा जहान बनाया। मेरे मज़हब के मुताबिक अगर मैं वंदे मातरम नहीं बोल सकता हूँ तो इस से मेरे दिल में मेरे मुल्क… pic.twitter.com/daMQOR8ZdH
— Abu Asim Azmi (@abuasimazmi) July 19, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.