ಶ್ರೀನಗರ: ಇದೇ ಮೊದಲ ಬಾರಿಗೆ, ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) ನಕ್ಸಲ್ ವಿರೋಧಿ ಘಟಕದ ಕಮಾಂಡೋ ಬೆಟಾಲಿಯನ್ ಫಾರ್ ರೆಸಲ್ಯೂಟ್ ಆಕ್ಷನ್ (ಕೋಬ್ರಾ) ಯುವ ಸಮೂಹದ ತಂಡವು ಈಗ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ ನಡೆಸಲಿದೆ. ಅದರ ಯುದ್ಧಭೂಮಿ ರೆಡ್ ಝೋನ್ನಿಂದ ಶ್ರೀನಗರಕ್ಕೆ ಬದಲಾಗಿದ್ದು, ಇದಕ್ಕಾಗಿ ತಂಡವು ಸುಮಾರು 2,000 ಕಿಲೋಮೀಟರ್ ಪ್ರಯಾಣಿಸಿ ಹೊಸ ಯುದ್ಧಭೂಮಿಗೆ ಆಗಮಿಸಿದೆ.
ಈಗಾಗಲೇ ಜಂಗಲ್ ವಾರ್ಫೇರ್ನಲ್ಲಿ ಅನುಭವ ಹೊಂದಿರುವ ಮತ್ತು ನಗರ ಯುದ್ಧದಲ್ಲಿ ತರಬೇತಿ ಪಡೆದಿರುವ 205 ಕೋಬ್ರಾಗಳು ಕಾರ್ಯಾಚರಣೆಯಲ್ಲಿ ಉಗ್ರ ವಿರೋಧಿ ಪಾಲ್ಗೊಳ್ಳಲು ಕಾಯುತ್ತಿದ್ದಾರೆ. ತಂಡವು ಬಿಹಾರದಲ್ಲಿದ್ದು, ಅಲ್ಲಿ ನಕ್ಸಲರ ಉಪಸ್ಥಿತಿಯು ಕುಗ್ಗುತ್ತಿದೆ, ಆದ್ದರಿಂದ, ಕಮಾಂಡೋಗಳ ಗುಂಪನ್ನು ಕಾಶ್ಮೀರಕ್ಕೆ ಸ್ಥಳಾಂತರಿಸಲಾಗಿದೆ.
ಕೋಬ್ರಾ ಪಡೆದ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಘಟಕಗಳ ಅಡಿಯಲ್ಲಿ ತರಬೇತಿ ಪಡೆಯುತ್ತಿದೆ.
“ವ್ಯಾಲಿ ಕ್ವಿಕ್ ಆಕ್ಷನ್ ಟೀಮ್ ಜೊತೆಗೆ ಶ್ರೀನಗರದಲ್ಲಿ ಮೂರು ತಂಡಗಳು ಶೀಘ್ರದಲ್ಲೇ ಕಾರ್ಯನಿರ್ವಹಿಸಲಿವೆ ಮತ್ತು ಮುನ್ನಡೆಸಲಿವೆ. ಈ ತಂಡಗಳು ಮೇ ತಿಂಗಳಲ್ಲಿ ಕಾಶ್ಮೀರವನ್ನು ತಲುಪಿವೆ ಮತ್ತು ಎಲ್ಲಾ ಸಂಬಂಧಿತ ಮತ್ತು ಅಗತ್ಯವಿರುವ ತರಬೇತಿಯನ್ನು ಪಡೆದುಕೊಂಡವೆ. ಈಗಾಗಲೇ ಕಾಡಿನ ಯುದ್ಧದಲ್ಲಿ ತರಬೇತಿ ಪಡೆದಿರುವುದರಿಂದ, ಕಾಶ್ಮೀರದಲ್ಲಿ ಯಾವುದೇ ಪಡೆಗೆ ಅಂತಹ ಅನುಭವವಿಲ್ಲದ ಕಾರಣ ಈ ಭಯೋತ್ಪಾದನಾ ವಿರೋಧಿ ಹೋರಾಟಕ್ಕೆ ಇನ್ನಷ್ಟು ಶಕ್ತಿ ದೊರೆಯಲಿದೆ.
“ಭಯೋತ್ಪಾದಕರ ಚಟುವಟಿಕೆಗಳು ಮತ್ತು ಕಾರ್ಯಾಚರಣೆಯ ವಿಧಾನದಲ್ಲಿ ಬದಲಾವಣೆಗಳು ಆಗುತ್ತಿವೆ, ಆದ್ದರಿಂದ, ಈ ಕಮಾಂಡೋಗಳ ಗುಂಪು ಎಲ್ಲಾ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತದೆ” ಎಂದು ಕಾಶ್ಮೀರದಲ್ಲಿ ನಿಯೋಜಿಸಲಾದ ಹಿರಿಯ ಸಿಆರ್ಪಿಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.