ಅಹಮದಾಬಾದ್: ನೈಸರ್ಗಿಕ ವಿಕೋಪದ ಸಮಯದಲ್ಲಿ ಜನರು ಅನುಭವಿಸುವ ಕಷ್ಟಗಳನ್ನು ತಗ್ಗಿಸಲು ಸೇನೆ ದೃಢ ಸಂಕಲ್ಪ ತೊಟ್ಟಿದೆ. ಇದಕ್ಕೆ ಅನುಗುಣವಾಗಿ, ಭಾರತೀಯ ಸೇನೆಯು ಗುಜರಾತ್ನಲ್ಲಿ ಭೀಕರ ಚಂಡಮಾರುತ ಬಿಪರ್ಜೋಯ್ ಹಿನ್ನೆಲೆಯಲ್ಲಿ ಸ್ಥಳೀಯರಿಗೆ ಸಹಾಯ ಮಾಡಲು ಸ್ವತಃ ಸಿದ್ಧತೆ ನಡೆಸಿದೆ.
ಪ್ರವಾಹ ಪರಿಹಾರ ವಸ್ತುಗಳನ್ನು ಭುಜ್, ಜಾಮ್ನಗರ, ಗಾಂಧಿಧಾಮ್, ಧರಂಗ್ಧ್ರ, ವಡೋದರಾ ಮತ್ತು ಗಾಂಧಿನಗರ ಹಾಗೂ ನಲಿಯಾ, ದ್ವಾರಕಾ ಮತ್ತು ಅಮ್ರೇಲಿಯಲ್ಲಿ ಸಿದ್ಧಪಡಿಸಲಾಗಿದ್ದು, ಶೀಘ್ರವೇ ವಿತರಿಸಲಿದೆ
ಸೇನೆಯ ಅಧಿಕಾರಿಗಳು ನಾಗರಿಕ ಆಡಳಿತ ಮತ್ತು ಎನ್ಡಿಆರ್ಎಫ್ನೊಂದಿಗೆ ಜಂಟಿಯಾಗಿ ಪರಿಹಾರ ಕಾರ್ಯಾಚರಣೆಗಳನ್ನು ಯೋಜಿಸಿದ್ದಾರೆ. ವಿಪತ್ತು ನಿರ್ವಹಣೆಯಲ್ಲಿ ತೊಡಗಿರುವ ಎಲ್ಲಾ ಏಜೆನ್ಸಿಗಳ ಜೊತೆ ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಮುಂದಾಗಿದೆ. ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಭಾರತೀಯ ಸೇನೆಯ ಪ್ರತಿನಿಧಿಗಳು ಸಹ ಭಾಗವಹಿಸಿದ್ದರು ಮತ್ತು ಬಿಕ್ಕಟ್ಟಿನ ಸಮಯದಲ್ಲಿ ಸಂಪೂರ್ಣ ಬೆಂಬಲವನ್ನು ನೀಡುವ ವಾಗ್ದಾನ ಮಾಡಿದರು ಎಂದು ಮೂಲಗಳು ತಿಳಿಸಿವೆ.
ರಭಸದ ಗಾಳಿ ಮತ್ತು ಭಾರೀ ಮಳೆಯಿಂದಾಗಿ ಉಂಟಾಗುವ ನಷ್ಟವನ್ನು ಕಡಿಮೆ ಮಾಡಲು ನೆರೆಯ ರಾಜಸ್ಥಾನದಿಂದಲೂ ಸಂಪನ್ಮೂಲಗಳನ್ನು ಲಭ್ಯಗೊಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.