ನವದೆಹಲಿ: ಛತ್ರಪತಿ ಶಿವಾಜಿ ಶೌರ್ಯ ಮತ್ತು ಧೈರ್ಯದ ದಾರಿದೀಪವಾಗಿದ್ದರು ಮತ್ತು ನಮಗೆ ಸ್ವರಾಜ್ಯವನ್ನು ತೋರಿಸಿದರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಶಿವಾಜಿ ಮಹಾರಾಜರ 350 ನೇ ವರ್ಷದ ಪಟ್ಟಾಭಿಷೇಕ ಸಮಾರಂಭದ ಕುರಿತು ವೀಡಿಯೊ ಸಂದೇಶ ನೀಡಿದ ಅವರು, ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕ ನಡೆದಾಗ ಅದು ಸ್ವರಾಜ್ಯದ ಘೋಷಣೆಯನ್ನು ಹೊಂದಿತ್ತು. ಛತ್ರಪತಿ ಶಿವಾಜಿ ನಮಗೆ ಸ್ಫೂರ್ತಿ ನೀಡುತ್ತಲೇ ಇದ್ದಾರೆ. ಶಿವಾಜಿ ಮಹಾನ್ ಸೈನಿಕ ಹಾಗೂ ಮಹಾನ್ ಆಡಳಿತಗಾರರಾಗಿದ್ದರು ಮತ್ತು ಅವರು ಗುಲಾಮಗಿರಿಯ ಮನಸ್ಥಿತಿಯನ್ನು ಕೊನೆಗೊಳಿಸಿದರು ಎಂದರು.
ನೂರಾರು ವರ್ಷಗಳ ಗುಲಾಮಗಿರಿಯು ದೇಶವಾಸಿಗಳ ಸ್ವಾಭಿಮಾನ ಮತ್ತು ಆತ್ಮವಿಶ್ವಾಸವನ್ನು ಕಸಿದುಕೊಂಡಿದೆ ಮತ್ತು ಆ ಸಮಯದಲ್ಲಿ ಜನರಲ್ಲಿ ಆತ್ಮವಿಶ್ವಾಸವನ್ನು ತುಂಬುವುದು ಕಷ್ಟಕರವಾದ ಕೆಲಸವಾಗಿತ್ತು. ಆದರೆ ಛತ್ರಪತಿ ಶಿವಾಜಿ ಮಹಾರಾಜರು ಆ ಅವಧಿಯಲ್ಲಿ ಆಕ್ರಮಣಕಾರರ ವಿರುದ್ಧ ಹೋರಾಡಿದರು ಮಾತ್ರವಲ್ಲದೆ ಸ್ವರಾಜ್ಯ ಸಾಧ್ಯ ಎಂಬ ನಂಬಿಕೆಯನ್ನು ಜನರಲ್ಲಿ ಮೂಡಿಸಿದರು. ಛತ್ರಪತಿ ಶಿವಾಜಿ ಮಹಾರಾಜರ ಆದರ್ಶಗಳು ಸ್ಫೂರ್ತಿದಾಯಕವಾಗಿವೆ ಎಂದರು.
ಶಿವಾಜಿ ಮಹಾರಾಜರು ಯಾವಾಗಲೂ ಭಾರತದ ಏಕತೆ ಮತ್ತು ಸಮಗ್ರತೆಯನ್ನು ಪ್ರಮುಖವಾಗಿ ಇಟ್ಟುಕೊಂಡಿದ್ದರು. ಇಂದು ಶಿವಾಜಿ ಮಹಾರಾಜರ ಚಿಂತನೆಗಳ ಪ್ರತಿಬಿಂಬವನ್ನು ‘ಏಕ ಭಾರತ-ಶ್ರೇಷ್ಠ ಭಾರತ’ ದೃಷ್ಟಿಯಲ್ಲಿ ಕಾಣಬಹುದು ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.