ನವದೆಹಲಿ: ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಲು ‘ಲೋಕಲ್ ಫಾರ್ ವೋಕಲ್’ ಪ್ರಧಾನಿ ನರೇಂದ್ರ ಮೋದಿಯವರು ನೀಡಿರುವ ಕರೆ ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರಿದೆ. ಪ್ರಧಾನಿಯವರ ಕರೆಗೆ ಓಗೊಟ್ಟು, ಈಶಾನ್ಯ ರಾಜ್ಯ ತ್ರಿಪುರಾದ ಅನಾನಸು ಬೆಳೆಗಾರರು ಕ್ವೀನ್ ಅನಾನಸ್ ಅನ್ನು ಬೆಳೆಯುತ್ತಿದ್ದಾರೆ, ಇದು ಅವರಿಗೆ ಉತ್ತಮ ಮಾರುಕಟ್ಟೆಯನ್ನು ನೀಡುತ್ತಿದೆ.
ಅನಾನಸ್ ಬೆಳೆಯಲು ರೈತರು ದೊಡ್ಡ ಮಟ್ಟದಲ್ಲಿ ಮುಂದಾಗುತ್ತಿರುವ ಹಿನ್ನೆಲೆಯಲ್ಲಿ ಅಗತ್ಯವಿರುವ ಸಂಸ್ಕರಣಾ ಸಾಮಗ್ರಿಗಳ ಜೊತೆಗೆ ನಿರ್ದಿಷ್ಟ ಪ್ರಮಾಣದ ಹಣವನ್ನು ನಿಗದಿಪಡಿಸುವ ಮೂಲಕ ರೈತರಿಗೆ ಸಹಾಯ ಮಾಡುವಲ್ಲಿ ಕೃಷಿ ಇಲಾಖೆಯೂ ಪ್ರಮುಖ ಪಾತ್ರ ವಹಿಸುತ್ತಿದೆ.
ಐದು ವರ್ಷಗಳ ಹಿಂದೆ ತ್ರಿಪುರಾಕ್ಕೆ ಭೇಟಿ ನೀಡಿದ್ದ ಅಂದಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ರಾಣಿ ಅನಾನಸ್ ಅನ್ನು ರಾಜ್ಯದ ಹಣ್ಣು ಎಂದು ಘೋಷಿಸಿದ್ದರು. ತ್ರಿಪುರಾ ಕ್ವೀನ್ ಅನಾನಸ್ನ ಅತಿದೊಡ್ಡ ಉತ್ಪಾದಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕ್ವೀನ್ ಅನಾನಸ್ನ ಕೆಲವು ಪ್ರಮುಖ ಲಕ್ಷಣಗಳೆಂದರೆ ಆಹ್ಲಾದಕರ ಪರಿಮಳ, ರಸವತ್ತಾದ ರುಚಿ ಮತ್ತು ಕಡಿಮೆ ತೂಕ.
ರೈತ ಉತ್ಪಾದಕ ಸಂಘಟನೆಯ ಅಧ್ಯಕ್ಷ ತ್ರಿಪುರಾದ ರೈತ ಪಿಂಟು ಶರ್ಮಾ ಈ ಬಗ್ಗೆ ಮಾತನಾಡಿ, ಅನಾನಸ್ ಬೆಳೆಗಾರರು ಹೆಚ್ಚಿನ ಬೇಡಿಕೆ ಇರುವಾಗ ಹಣ್ಣನ್ನು ಬೆಳೆಯಲು ಅಪೂರ್ವ ವಿಧಾನವನ್ನು ಬಳಸುತ್ತಿದ್ದಾರೆ. ಕ್ವೀನ್ ಅನಾನಸ್ ಅನ್ನು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಯುವ ಕೆಲವು ಪ್ರದೇಶಗಳೆಂದರೆ ಕಮಲಪುರ್, ಬಗೈಚಾರಿ, ಉದಯಪುರ, ಸಬ್ರೂಮ್. ದುರ್ಗಾಪೂಜೆಯ ಸಮಯದಲ್ಲಿ ಇದಕ್ಕೆ ಹೆಚ್ಚಿನ ಬೇಡಿಕೆ ಇರುವುದರಿಂದ ರೈತರು ಇನ್ನಷ್ಟು ಸಂತೋಷವಾಗಿದ್ದಾರೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.