ತಿರುವನಂತಪುರಂ: ಕೇರಳದ ಕೋಝಿಕ್ಕೋಡ್ನಲ್ಲಿ ಮೂವರು ಮೃತಪಟ್ಟು ಒಂಬತ್ತು ಮಂದಿ ಗಾಯಗೊಂಡಿರುವ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಗುರುವಾರ ಆರೋಪಿ ಶಾರುಖ್ ಸೈಫಿ ಇಸ್ಲಾಮಿಕ್ ಬೋಧಕ ಝಾಕಿರ್ ನಾಯಕ್ನಿಂದ ಪ್ರೇರಿತನಾಗಿದ್ದ ಎಂದು ಹೇಳಿದೆ.
ತನಿಖೆಯ ಭಾಗವಾಗಿ, ತನಿಖಾ ಸಂಸ್ಥೆಯು ದೆಹಲಿಯ ಶಾಹೀನ್ ಬಾಗ್ ಪ್ರದೇಶದ ಹತ್ತು ಸ್ಥಳಗಳಲ್ಲಿ ಶೋಧ ನಡೆಸಿತು, ಅಲ್ಲಿಗೆ ಆರೋಪಿಯು ಬಂದಿದ್ದ ಎಂದು ಹೇಳಲಾಗಿದೆ.
ಅಧಿಕಾರಿಯೊಬ್ಬರ ಪ್ರಕಾರ, ಇಂದು ಬೆಳಿಗ್ಗೆ ನಡೆದ ಶೋಧ ಕಾರ್ಯಗಳು ಶಾರುಖ್ ಸೈಫಿ ಸಂಬಂಧಿಸಿದ ಸ್ಥಳಗಳು ಮತ್ತು ಇತರ ಶಂಕಿತರ ಸ್ಥಳಗಳನ್ನು ಒಳಗೊಂಡಿವೆ.
ಬೆಂಕಿ ಹಚ್ಚಿದ ಆರೋಪದ ಮೇಲೆ ಸೈಫಿಯನ್ನು ಏಪ್ರಿಲ್ 6 ರಂದು ಬಂಧಿಸಲಾಯಿತು. ಅಲೆಪ್ಪಿ ಕಣ್ಣೂರು ಎಕ್ಸಿಕ್ಯುಟಿವ್ ಎಕ್ಸ್ಪ್ರೆಸ್ನ ಡಿ 1 ಕೋಚ್ಗೆ ಬೆಂಕಿ ಹಚ್ಚಿ, ಮಗು ಮತ್ತು ಇತರ ಇಬ್ಬರ ದುರಂತ ಸಾವಿಗೆ ಕಾರಣವಾದ ಆರೋಪವನ್ನುಇವನು ಹೊತ್ತಿದ್ದಾನೆ. ಆರಂಭದಲ್ಲಿ, ಕೇರಳದ ಕೋಝಿಕ್ಕೋಡ್ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಏಪ್ರಿಲ್ 17 ರಂದು ಎನ್ಐಎ ತನಿಖೆಯನ್ನು ವಹಿಸಿಕೊಂಡಿದೆ.
National Investigation Agency (#NIA) probing the train arson case which left three dead and nine others injured in #Kerala's Kozhikode, on Thursday said that accused Shahrukh Saifi was inspired by Islamic preacher Zakir Naik.
As part of the investigation, the probe agency… pic.twitter.com/EpojwilALk
— IANS (@ians_india) May 11, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.