ಮುಂಬೈ: ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ನಾಯಕ ರಾಜ್ ಠಾಕ್ರೆ ಅವರು ಎಚ್ಚರಿಕೆ ನೀಡಿದ ಒಂದು ದಿನದ ನಂತರ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಇಂದು ಮಾಹಿಮ್ನಲ್ಲಿನ ದರ್ಗಾವನ್ನು ನೆಲಸಮಗೊಳಿಸಿದೆ.
ಅರಬ್ಬಿ ಸಮುದ್ರದಲ್ಲಿ ಅಕ್ರಮವಾಗಿ ದರ್ಗಾ ನಿರ್ಮಿಸಲಾಗುತ್ತಿದೆ ಎಂದಿರುವ ಠಾಕ್ರೆ, ಶೀಘ್ರವೇ ಧ್ವಂಸಗೊಳಿಸದಿದ್ದರೆ ಅದೇ ಸ್ಥಳದಲ್ಲಿ ಎಂಎನ್ಎಸ್ ಗಣಪತಿ ಮಂದಿರ ನಿರ್ಮಿಸಲಿದ್ದೇವೆ ಎಂದು ಎಚ್ಚರಿಸಿದ್ದರು.
ಇಂದು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ತಂಡವು ಭಾರೀ ಪೊಲೀಸ್ ಬಂದೋಬಸ್ತ್, ಜೆಸಿಬಿ ಮತ್ತು ಇತರ ಸಲಕರಣೆಗಳೊಂದಿಗೆ ಮಾಹಿಮ್ ಸಮುದ್ರ ತೀರಕ್ಕೆ ಆಗಮಿಸಿ ಅಪರಿಚಿತ ವ್ಯಕ್ತಿಯ ‘ಮಜಾರ್’ (ಸಮಾಧಿ) ಅನ್ನು ಧ್ವಂಸ ಮಾಡಿದೆ. ಈ ಮಜಾರ್ ಹಸಿರು ಬಟ್ಟೆ, ಹೂಮಾಲೆಗಳು ಮತ್ತು ಹೂವಿನ-ಚಾದರ್ಗಳಿಂದ ಮುಚ್ಚಲ್ಪಟ್ಟು ಕೆಲವು ಭಕ್ತರನ್ನು ಆಕರ್ಷಿಸುತ್ತಿತ್ತು, ಮೊಣಕಾಲು ಆಳದ ಸಮುದ್ರದ ನೀರಿನಲ್ಲಿ ಕೆಲವು ಮೀಟರ್ಗಳವರೆಗೆ ಕ್ರಮಿಸಿ ಈ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಇದು ಅಕ್ರಮ ಕಟ್ಟಡವೆಂದು ರಾಜ್ ಠಾಕ್ರೆ ಆರೋಪಿಸಿ ಧ್ವಂಸ ಮಾಡಬೇಕೆಂದು ಬೇಡಿಕೆಯಿಟ್ಟಿದ್ದರು.
BMC, ಪೊಲೀಸ್ ತಂಡಗಳು ಅದನ್ನು ಕೂಲಂಕಷವಾಗಿ ಪರೀಕ್ಷಿಸಿ, ಹಸಿರು ಮತ್ತು ಬಿಳಿ ಧ್ವಜಗಳ ಧ್ವಜಸ್ತಂಭಗಳನ್ನು ತೆಗೆದುಹಾಕಿ, ಮಜಾರ್ ಅನ್ನು ಬುಲ್ಡೋಜರ್ ಮೂಲಕ ಉರುಳಿಸಿದೆ.
ರಾಜ್ ಠಾಕ್ರೆ ಅವರು ರಾಜ್ಯ ಸರ್ಕಾರ, ಮುಂಬೈ ಪೊಲೀಸ್ ಮತ್ತು ನಾಗರಿಕ ಆಡಳಿತದ ಕಿವಿ ಹಿಂಡಿದ ನಂತರ ಮತ್ತು ಅಲ್ಲಿನ ಸಂಭಾವ್ಯ ಭದ್ರತಾ ಬೆದರಿಕೆಯ ಬಗ್ಗೆ ಗಮನ ಸೆಳೆದ ನಂತರ ಈ ಬೆಳವಣಿಗೆ ಸಂಭವಿಸಿದೆ.
Maharashtra | Demolition drive started at the encroached site of 'Dargah' amid heavy police deployment at Mahim beach in Mumbai after MNS chief Raj Thackeray yesterday alleged that a Dargah is being built here illegally. pic.twitter.com/G0yx2c2Wq2
— ANI (@ANI) March 23, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.