News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮನೀಶ್‌ ಸಿಸೋಡಿಯಾ ಇಡಿ ಕಸ್ಟಡಿಯನ್ನು 5 ದಿನಗಳವರೆಗೆ ವಿಸ್ತರಿಸಿದ ಕೋರ್ಟ್

ನವದೆಹಲಿ: ದೆಹಲಿ ಮದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಮಾಜಿ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ವಿರುದ್ಧದ ಆರೋಪಗಳ ತನಿಖೆಗೆ ಜಾರಿ ನಿರ್ದೇಶನಾಲಯವು ಒಂದು ವಾರ ಕಾಲಾವಕಾಶ ಕೋರಿದ ನಂತರ ದೆಹಲಿ ನ್ಯಾಯಾಲಯವು ಮನೀಶ್ ಸಿಸೋಡಿಯಾ ಅವರ ಕಸ್ಟಡಿಯನ್ನು ಇಂದು ಐದು ದಿನಗಳವರೆಗೆ ವಿಸ್ತರಿಸಿದೆ.

ಜಾರಿ ನಿರ್ದೇಶನಾಲಯವು ಪ್ರತಿದಿನ 30 ನಿಮಿಷದಿಂದ ಒಂದು ಗಂಟೆಯವರೆಗೆ ಮಾತ್ರ ಅವರನ್ನು ಪ್ರಶ್ನಿಸುತ್ತದೆ ಮತ್ತು ಇನ್ನು ಮುಂದೆ ಅವರನ್ನು ಜೈಲಿನಲ್ಲಿ ಇರಿಸುವ ಅಗತ್ಯವಿಲ್ಲ ಎಂದು ಎಎಪಿ ವಾದಿಸಿತ್ತು. ಅಲ್ಲದೇ ಸಿಬಿಐ ಕೂಡ ತನಗೆ ಇದೇ ಪ್ರಶ್ನೆಗಳನ್ನು ಕೇಳುತ್ತದೆ ಎಂದು ಮನೀಶ್ ಸಿಸೋಡಿಯಾ ನ್ಯಾಯಾಲಯಕ್ಕೆ ದೂರು ನೀಡಿದ್ದರು.

“ನಾನು ಕಸ್ಟಡಿ ವಿಸ್ತರಣೆಯನ್ನು ವಿರೋಧಿಸುತ್ತಿದ್ದೇನೆ ಏಕೆಂದರೆ ಜಾರಿ ನಿರ್ದೇಶನಾಲಯವು ಸಿಬಿಐನ ತನಿಖೆಯನ್ನು ನಡೆಸುತ್ತಿದೆ. ಇಡಿ ಅಪರಾಧದ ಆದಾಯವನ್ನು ಮಾತ್ರ ತನಿಖೆ ಮಾಡುತ್ತದೆಯೇ ಹೊರತು, ಅಪರಾಧವನ್ನಲ್ಲ” ಎಂದು  ಸಿಸೋಡಿಯಾ ವಾದಿಸಿದ್ದರು.

ಈ ಹಿನ್ನೆಲೆಯಲ್ಲಿ ತನಿಖಾ ಸಂಸ್ಥೆಗೆ ಪ್ರಶ್ನೆಗಳನ್ನು ಪುನರಾವರ್ತಿಸದಂತೆ ಇಡಿಗೆ ಆದೇಶಿಸಲಾಗಿದೆ.

ರದ್ದುಗೊಂಡ ಹೊಸ ಮದ್ಯ ನೀತಿಗೆ ಸಂಬಂಧಿಸಿದ ಭ್ರಷ್ಟಾಚಾರದ ಆರೋಪದ ಮೇಲೆ ಸಿಬಿಐನಿಂದ ಬಂಧಿಸಲ್ಪಟ್ಟ ಮನೀಶ್ ಸಿಸೋಡಿಯಾ ಫೆಬ್ರವರಿ 26 ರಿಂದ ಜೈಲಿನಲ್ಲಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ.

ತನಿಖಾ ಸಂಸ್ಥೆ ಇಂದು ಅವರನ್ನು ತನಿಖೆ ಮಾಡಲು ಇನ್ನೂ ಏಳು ದಿನಗಳ ಕಸ್ಟಡಿಗೆ ಕೋರಿದೆ. ಆದರೆ ನ್ಯಾಯಾಲಯ ಐದು ದಿನಗಳವರೆಗೆ ಅವರ ಕಸ್ಟಡಿಯನ್ನು ವಿಸ್ತರಿಸಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top