News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭವಿಷ್ಯದ ಸಂಘರ್ಷ ಊಹಿಸಲು ಅಸಾಧ್ಯ, ಸದಾ ಸಿದ್ಧರಾಗಿರಿ: ನೌಕಾಸೇನೆಗೆ ರಾಜನಾಥ್

ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸೋಮವಾರ ಭಾರತೀಯ ನೌಕಾಪಡೆಯ ಕಾರ್ಯಾಚರಣೆಯ ಸಾಮರ್ಥ್ಯವನ್ನು ಪರಿಶೀಲಿಸಿದ್ದಾರೆ ಮತ್ತು ಭವಿಷ್ಯದ ಸಂಘರ್ಷಗಳನ್ನು ಊಹೆ ಮಾಡಲು ಸಾಧ್ಯವಾಗದ  ಕಾರಣ ಸದಾ ಸಿದ್ಧರಾಗಿರಿ ಎಂದು ಉನ್ನತ ನೌಕಾ ಕಮಾಂಡರ್‌ಗಳಿಗೆ ಸಲಹೆ ನೀಡಿದ್ದಾರೆ.

ಭಾರತದ ಮೊದಲ ಸ್ವದೇಶಿ ವಿಮಾನವಾಹಕ ನೌಕೆ INS ವಿಕ್ರಾಂತ್‌ನಲ್ಲಿ ನಡೆದ ನೌಕಾ ಕಮಾಂಡರ್‌ಗಳ ಸಮ್ಮೇಳನದಲ್ಲಿ ಅವರು ಸಮುದ್ರದಲ್ಲಿನ ಕಾರ್ಯಾಚರಣೆಯ ಪ್ರದರ್ಶನಗಳನ್ನು ಪರಿಶೀಲಿಸಿದರು ಮತ್ತು ದೇಶದ ಕಡಲ ಹಿತಾಸಕ್ತಿಗಳನ್ನು ಕಾಪಾಡುವ ನಿಟ್ಟಿನಲ್ಲಿ ಬಹು ಆಯಾಮದ ಕಾರ್ಯಾಚರಣೆಗಳನ್ನು ಕೈಗೊಳ್ಳುವ ನೌಕಾಪಡೆಯ ಸಾಮರ್ಥ್ಯವನ್ನು ಎತ್ತಿ ತೋರಿಸಿದರು.

“ಭವಿಷ್ಯದ ಘರ್ಷಣೆಗಳು ಅನಿರೀಕ್ಷಿತವಾಗಿರುತ್ತವೆ. ನಿರಂತರವಾಗಿ ವಿಕಸನಗೊಳ್ಳುತ್ತಿರುವ ವಿಶ್ವ ಕ್ರಮವು ಪ್ರತಿಯೊಬ್ಬರನ್ನು ಮರು ತಂತ್ರಗಾರಿಕೆಗೆ ಉತ್ತೇಜಿಸುತ್ತಿದೆ. ಉತ್ತರ ಮತ್ತು ಪಶ್ಚಿಮ ಗಡಿಗಳಲ್ಲಿ ಮತ್ತು ಇಡೀ ಕರಾವಳಿಯಲ್ಲಿ ನಿರಂತರ ಜಾಗರೂಕತೆಯನ್ನು ಕಾಯ್ದುಕೊಳ್ಳಬೇಕು. ಭವಿಷ್ಯದ ಎಲ್ಲಾ ಸವಾಲುಗಳನ್ನು ಎದುರಿಸಲು ನಾವು ಸಿದ್ಧರಾಗಿರಬೇಕು” ಎಂದು ಸಿಂಗ್ ಹೇಳಿದ್ದಾರೆ.

ಕಮಾಂಡರ್‌ಗಳನ್ನು ಉದ್ದೇಶಿಸಿ ಭಾಷಣ ಮಾಡಿದ ಅವರು,  ಭಾರತೀಯ ನೌಕಾಪಡೆಯು ದೃಢವಾಗಿ ನಿಂತಿರುವ ಮತ್ತು ರಾಷ್ಟ್ರೀಯ ಹಿತಾಸಕ್ತಿಗಳನ್ನು ಧೈರ್ಯ ಮತ್ತು ಸಮರ್ಪಣೆ ಯೊಂದಿಗೆ ರಕ್ಷಿಸುತ್ತಿರುವ ಶಕ್ತಿ ಎಂದು ಶ್ಲಾಘಿಸಿದರು.

ಕಡಲ ಡೊಮೇನ್‌ನಲ್ಲಿ ಉದಯೋನ್ಮುಖ ಭದ್ರತಾ ಸವಾಲುಗಳನ್ನು ಪರಿಣಾಮಕಾರಿಯಾಗಿ ಜಯಿಸಲು ಭವಿಷ್ಯದ ಸಾಮರ್ಥ್ಯದ ಅಭಿವೃದ್ಧಿಯತ್ತ ಗಮನಹರಿಸುವುದನ್ನು ಮುಂದುವರಿಸಬೇಕು ಎಂದು ಅವರು ಪ್ರೋತ್ಸಾಹಿಸಿದರು.

ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಯನ್ನು ಖಚಿತಪಡಿಸಿಕೊಳ್ಳಲು ಸುರಕ್ಷಿತ ಗಡಿಗಳು ಮೊದಲ ಅವಶ್ಯಕತೆಯಾಗಿದೆ ಎಂದು ರಾಜನಾಥ್ ಸಿಂಗ್ ಪ್ರತಿಪಾದಿಸಿದರು ಮತ್ತು  ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಈ ಉದ್ದೇಶವನ್ನು ಸಾಧಿಸಲು  ಉತ್ಸಾಹದೊಂದಿಗೆ ‘ಅಮೃತ ಕಾಲ’ದಲ್ಲಿ ಮುನ್ನಡೆಯುತ್ತಿದ್ದೇವೆ ಎಂದು ಹೇಳಿದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top