ನವದೆಹಲಿ: ಈ ಬಾರಿ ಮಹಾಶಿವರಾತ್ರಿಯಂದು ಉಜ್ಜಯಿನಿಯಲ್ಲಿ 21 ಲಕ್ಷ ಮಣ್ಣಿನ ಹಣತೆಗಳನ್ನು ಹಚ್ಚಿ ಗಿನ್ನಿಸ್ ದಾಖಲೆ ನಿರ್ಮಿಸುವ ಪ್ರಯತ್ನ ಮಾಡಲಾಗುವುದು ಎಂದು ಸರ್ಕಾರಿ ಅಧಿಕಾರಿಗಳು ಘೋಷಿಸಿದ್ದಾರೆ. ಕಳೆದ ವರ್ಷ ಮಹಾಶಿವರಾತ್ರಿಯಂದು ಉಜ್ಜಯಿನಿಯಲ್ಲಿ 11,71,078 ಮಣ್ಣಿನ ದೀಪಗಳನ್ನು ಬೆಳಗಿಸಲಾಗಿತ್ತು.
ಈ ಬೃಹತ್ ಕಾರ್ಯಕ್ರಮದ ಸಿದ್ಧತೆಗಳನ್ನು ಮೇಲ್ವಿಚಾರಣೆ ಮಾಡಲು ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಸಭೆ ನಡೆಸಿದ್ದು, ಫೆಬ್ರವರಿ 18 ರಂದು ಉಜ್ಜಯಿನಿಯಲ್ಲಿ ಮಹಾಶಿವರಾತ್ರಿ ಹಬ್ಬವನ್ನು ದೀಪಾವಳಿಯಂತೆಯೇ ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಘೋಷಿಸಿದ್ದಾರೆ.
“ಮಹಾಶಿವರಾತ್ರಿಯಂದು, ಉಜ್ಜಯಿನಿಯ ನಿವಾಸಿಗಳು 21 ಲಕ್ಷ ದೀಪಗಳನ್ನು ಬೆಳಗಿಸುವ ಮೂಲಕ ಮಹಾಕಾಲನಿಗೆ ತಮ್ಮ ಸಮರ್ಪಣೆಯನ್ನು ವ್ಯಕ್ತಪಡಿಸಲಿದ್ದಾರೆ. ಈ ಅಭೂತಪೂರ್ವ ಕಾರ್ಯಕ್ರಮವು ಸಮಾಜ ಮತ್ತು ಸರ್ಕಾರದ ಸಹಭಾಗಿತ್ವದಿಂದ ಮಾತ್ರ ಸಾಧ್ಯ” ಎಂದು ಸಿಎಂ ಚೌಹಾಣ್ ಹೇಳಿದ್ದಾರೆ.
ಕ್ಷಿಪ್ರಾ ನದಿಯ ದಡದಲ್ಲಿ 3 ಲಕ್ಷದ 10 ಸಾವಿರ ದೀಪಗಳು ಬೆಳಗುತ್ತವೆ. ಸುನೆಹ್ರಿ ಘಾಟ್ನಲ್ಲಿ 1 ಲಕ್ಷ 70 ಸಾವಿರ, ದತ್ ಅಖಾರಾದಲ್ಲಿ 4 ಲಕ್ಷ 50 ಸಾವಿರ, ರಾಮ್ ಘಾಟ್ನಿಂದ ಬಾಂಬೆ ಧರ್ಮಶಾಲಾಕ್ಕೆ 2 ಲಕ್ಷ 50 ಸಾವಿರ ಮತ್ತು ಬಾಂಬೆ ಧರ್ಮಶಾಲಾದಿಂದ ನರಸಿಂಗ್ ಮಂದಿರದವರೆಗೆ 3 ಲಕ್ಷ 70 ಸಾವಿರ ದೀಪಗಳನ್ನು ಬೆಳಗಿಸಲಾಗುತ್ತದೆ. ಅಲ್ಲದೆ, ಭೂಖಿ ಮಾತಾ ದೇವಾಲಯದ ದಿಕ್ಕಿನಲ್ಲಿ ಮಾಲಿ ಘಾಟ್ನಲ್ಲಿ 475 000 ದೀಪಗಳನ್ನು ಬೆಳಗಿಸುವ ಯೋಜನೆ ಇದೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.