ನವದೆಹಲಿ: ಭಾರತ ಏಳನೇ ‘ಆಪರೇಷನ್ ದೋಸ್ತ್’ ವಿಮಾನವು 23 ಟನ್ಗೂ ಹೆಚ್ಚು ಪರಿಹಾರ ಸಾಮಗ್ರಿಗಳೊಂದಿಗೆ ಇಂದು ಸಿರಿಯಾವನ್ನು ತಲುಪಿದೆ.
ಪರಿಹಾರ ಸಾಮಗ್ರಿಯಲ್ಲಿ ಜೆನ್ಸೆಟ್ಗಳು, ಸೋಲಾರ್ ಲ್ಯಾಂಪ್ಗಳು, ತುರ್ತು ಮತ್ತು ಕ್ರಿಟಿಕಲ್ ಕೇರ್ ಔಷಧಗಳು ಮತ್ತು ವಿಪತ್ತು ಪರಿಹಾರ ವಸ್ತುಗಳು ಸೇರಿವೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ವಿಮಾನವನ್ನು ಡಮಾಸ್ಕಸ್ ವಿಮಾನ ನಿಲ್ದಾಣದಲ್ಲಿ ಸಿರಿಯಾದ ಸ್ಥಳೀಯ ಆಡಳಿತ ಮತ್ತು ಪರಿಸರ ಉಪ ಸಚಿವ ಮೌತಾಜ್ ದೌಜಿ ಸ್ವೀಕರಿಸಿದರು.
ಪರಿಹಾರ ಸಾಮಗ್ರಿಗಳು, ವೈದ್ಯಕೀಯ ನೆರವು ಮತ್ತು ತುರ್ತು ಮತ್ತು ಕ್ರಿಟಿಕಲ್ ಕೇರ್ ಔಷಧಿಗಳೊಂದಿಗೆ ವಾಯುಸೇನೆಯ ವಿಮಾನವು ಮೊದಲು ಸಿರಿಯಾದಲ್ಲಿ ಇಳಿಯುತ್ತದೆ ಮತ್ತು ವಸ್ತುಗಳನ್ನು ಹಸ್ತಾಂತರಿಸುತ್ತದೆ. ನಂತರ ಟರ್ಕಿಗೆ ಹೋಗುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಸಚಿವಾಲಯದ ಪ್ರಕಾರ, ವಿಮಾನವು 35 ಟನ್ಗಳಿಗಿಂತ ಹೆಚ್ಚು ಪರಿಹಾರ ಸಾಮಗ್ರಿಗಳನ್ನು ಹೊತ್ತೊಯ್ಯುತ್ತಿದೆ, ಅದರಲ್ಲಿ 23 ಟನ್ಗಳು ಸಿರಿಯಾಕ್ಕೆ ನೀಡಲಿದೆ ಮತ್ತು ಸುಮಾರು 12 ಟನ್ಗಳು ಟರ್ಕಿಗೆ ನೀಡಲಿದೆ.
7th #OperationDost flight has delivered the relief material for Türkiye at Adana airport.
This included medical equipment like patient monitor, ECG, syringe pumps and disaster relief material, along with supplies for our teams on the ground. pic.twitter.com/v8JbjDOPNc
— Arindam Bagchi (@MEAIndia) February 12, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.