News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಾರತ ವಿರೋಧಿ ಜಾಗತಿಕ ಮಾಧ್ಯಮಗಳಿಗೆ ಆನಂದ್‌ ಮಹೀಂದ್ರಾ ಕಿವಿಮಾತು

ನವದೆಹಲಿ: ಅದಾನಿ ಸಮೂಹದ ಕುರಿತು ಹಿಂಡೆನ್‌ಬರ್ಗ್‌ನ ವರದಿಯ ವಿವಾದ ಭುಗಿಲೆದ್ದ ನಂತರ, ಭಾರತ ವಿರೋಧಿ ಚಟುವಟಿಕೆಗಳಲ್ಲಿ ನಿರತವಾಗಿರುವ ಕೆಲವು ಜಾಗತಿಕ ಮಾಧ್ಯಮಗಳು ಹಲವಾರು ಸಂಘಟಿತ ಪ್ರಯತ್ನಗಳನ್ನು ಭಾರತದ ವಿರುದ್ಧ ನಡೆಸುತ್ತಿವೆ. ಈ ಒಂದು ವರದಿ ಭಾರತವನ್ನು ಜಾಗತಿಕ ಆರ್ಥಿಕ ಶಕ್ತಿಗಳಲ್ಲಿ ಒಂದಾಗುವಂತೆ ಮಾಡುವುದನ್ನು ತಡೆಯುತ್ತದೆ ಎಂದು ಅವರು ಊಹಿಸಿದಂತಿದೆ.

ಜಾಗತಿಕ ಮಾಧ್ಯಮಗಳ ಇಂತಹ ಭಾರತ ವಿರೋಧಿ ಧೋರಣೆಗೆ  ಕೈಗಾರಿಕೋದ್ಯಮಿ ಮತ್ತು ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರಾ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಇಂತಹ ಊಹಾಪೋಹದ ವರದಿಗಳ ಮೇಲೆ ಭಾರತಕ್ಕೆ ಸವಾಲು ಹಾಕಲು ಹೋಗಬಾರದು ಎಂದಿದ್ದಾರೆ.

ಟ್ವಿಟ್‌ ಮಾಡಿರುವ ಅವರು, “ವ್ಯಾಪಾರ ವಲಯದಲ್ಲಿನ ಪ್ರಸ್ತುತ ಸವಾಲುಗಳು ಜಾಗತಿಕ ಆರ್ಥಿಕ ಶಕ್ತಿಯಾಗಲು ಭಾರತದ ಮಹತ್ವಾಕಾಂಕ್ಷೆಗಳನ್ನು ತಡೆಯುತ್ತವೆಯೇ ಎಂದು ಜಾಗತಿಕ ಮಾಧ್ಯಮಗಳು ಊಹಿಸುತ್ತಿವೆ” ಎಂದು ಹೇಳಿದ್ದಾರೆ

ಅಂತಹ ವರದಿಗಳನ್ನು ಟೀಕಿಸಿರುವ ಅವರು, “ನಾನು ಭೂಕಂಪಗಳು, ಬರಗಳು, ಆರ್ಥಿಕ ಹಿಂಜರಿತಗಳು, ಯುದ್ಧಗಳು, ಭಯೋತ್ಪಾದಕ ದಾಳಿಗಳನ್ನು ಎದುರಿಸುವುದನ್ನು ನೋಡುವಷ್ಟು ದೀರ್ಘಕಾಲದಿಂದ ಬದುಕಿದ್ದೇನೆ. ನಾನು ಹೇಳುವುದೊಂದೇ: ಎಂದಿಗೂ, ಎಂದೆಂದಿಗೂ ಭಾರತದ ವಿರುದ್ಧ ಸವಾಲು ಹಾಕಬೇಡಿ” ಎಂದಿದ್ದಾರೆ.

ಇನ್ನೊಂದೆಡೆ ಸಂದರ್ಶನದಲ್ಲಿ ಅದಾನಿ ಬಿಕ್ಕಟ್ಟಿನ ಕುರಿತು ಮಾತನಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಭಾರತದ ಹಣಕಾಸು ಕ್ಷೇತ್ರವು ಉತ್ತಮವಾಗಿ ನಿಯಂತ್ರಿಸಲ್ಪಟ್ಟಿದೆ ಮತ್ತು ಜಾಗತಿಕವಾಗಿ ಎಷ್ಟೇ ಮಾತನಾಡಿದರೂ ಒಂದು ನಿದರ್ಶನ ನಾವು ಏನು ಎಂಬುದನ್ನು ಸೂಚಿಸುವುದಿಲ್ಲ. ಭಾರತೀಯ ಹಣಕಾಸು ಮಾರುಕಟ್ಟೆಗಳನ್ನು ನಿಯಂತ್ರಿಸಲಾಗಿದೆ ಎಂದಿದ್ದಾರೆ.

“ಭಾರತವು ಮೊದಲಿನಂತೆಯೇ ಉಳಿದುಕೊಂಡಿದೆ, ಸ್ಥಿರ ಸರ್ಕಾರ ಮತ್ತು ಉತ್ತಮ ನಿಯಂತ್ರಿತ ಹಣಕಾಸು ಮಾರುಕಟ್ಟೆಯೊಂದಿಗೆ ಸಂಪೂರ್ಣವಾಗಿ ಉತ್ತಮವಾಗಿ ಆಡಳಿತ ನಡೆಸುತ್ತಿದೆ. ಇದರ ಪರಿಣಾಮವಾಗಿ, ಮೊದಲು ಇದ್ದ ಹೂಡಿಕೆದಾರರ ವಿಶ್ವಾಸವು ಈಗಲೂ ಮುಂದುವರಿದಿದೆ” ಎಂದಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top