News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕಾರ್ಗಿಲ್-ಶ್ರೀನಗರ-ಜಮ್ಮು ನಡುವೆ ಕೊರಿಯರ್‌ ಸೇವೆ ಆರಂಭಿಸಿದ ವಾಯುಸೇನೆ

ನವದೆಹಲಿ: ಭಾರತೀಯ ವಾಯುಪಡೆಯು ಯಾವುದೇ ಅನಿರೀಕ್ಷಿತ ಸವಾಲುಗಳನ್ನು ಎದುರಿಸಲು ಹೆಚ್ಚಿನ ಜಾಗರೂಕತೆಯಿಂದ ಸನ್ನದ್ಧವಾಗಿರುವುದು ಮಾತ್ರವಲ್ಲದೇ ನಾಗರಿಕರ ಪರಿಹಾರ ಮತ್ತು ಸಹಾಯ ಒದಗಿಸುವುದರಲ್ಲೂ ಸದಾ ಮುಂಚೂಣಿಯಲ್ಲಿರುತ್ತದೆ.

ಹಿಮಪಾತದಿಂದಾಗಿ ಶ್ರೀನಗರದಿಂದ ಕಾರ್ಗಿಲ್‌ಗೆ ರಸ್ತೆಯನ್ನು ಮುಚ್ಚುವುದರಿಂದ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ನ ನಾಗರಿಕರು ಚಳಿಗಾಲದಲ್ಲಿ ಸವಾಲಿನ ಪರಿಸ್ಥಿತಿಗಳನ್ನು ಎದುರಿಸುತ್ತಾರೆ. ಈ ಕಷ್ಟದ ಸಮಯದಲ್ಲಿ ವಾಯುಸೇನೆ ಸ್ಥಳೀಯರಿಗೆ ಶ್ರೀನಗರದಿಂದ ಕಾರ್ಗಿಲ್‌ಗೆ ಮತ್ತು ಕಾರ್ಗಿಲ್‌ನಿಂದ ಜಮ್ಮು/ಶ್ರೀನಗರಕ್ಕೆ ಏರ್‌ಲಿಫ್ಟ್ ಅನ್ನು ಒದಗಿಸುವ ಮೂಲಕ ನೆರವಾಗುತ್ತಿದೆ.

ಜೀವ ಉಳಿಸುವ ಕ್ರಮವಾಗಿ ದೂರದ ಸ್ಥಳಗಳಿಂದ ಹೆಲಿಕಾಪ್ಟರ್‌ಗಳನ್ನು ಬಳಸಿಕೊಂಡು ರೋಗಿಗಳನ್ನು ಸ್ಥಳಾಂತರಿಸುವ ಮೂಲಕ ವಾಯುಸೇನೆ ಸಹಾಯ ಮಾಡುತ್ತಾ ಬಂದಿದೆ. ಈ ವರ್ಷ ವಾಯುಸೇನೆಯು ಕಾರ್ಗಿಲ್‌ನಿಂದ ಶ್ರೀನಗರ ಮತ್ತು ಜಮ್ಮುವಿಗೆ ಕಾರ್ಗಿಲ್ ಕೊರಿಯರ್ ಸೇವೆಗಳನ್ನು ಇಂದಿನಿಂದ ಪ್ರಾರಂಭಿಸಲಿದ್ದು, ರಸ್ತೆ ಮುಚ್ಚುವ ಅವಧಿಯ ಉದ್ದಕ್ಕೂ ಸೇವೆ ಮುಂದುವರಿಯಲಿದೆ.

ಕೊರಿಯರ್ ಸೇವೆಗಳು ಶ್ರೀನಗರ ಮತ್ತು ಕಾರ್ಗಿಲ್ ನಡುವೆ ಪ್ರತಿ ಸೋಮವಾರ ಮತ್ತು ಬುಧವಾರ ಮತ್ತು ಕಾರ್ಗಿಲ್ ಮತ್ತು ಜಮ್ಮು ನಡುವೆ ಪ್ರತಿ ಮಂಗಳವಾರ ಮತ್ತು ಗುರುವಾರ ಕಾರ್ಯನಿರ್ವಹಿಸುತ್ತವೆ.

ಕೊರಿಯರ್ ಸೇವೆಗಳ ಕೆಲಸದ ಬಗ್ಗೆ ವಾಯುಸೇನೆ ಮತ್ತು ನಾಗರಿಕ ಅಧಿಕಾರಿಗಳ ನಡುವೆ ಇತ್ತೀಚೆಗೆ ಸಮನ್ವಯ ಸಭೆಯನ್ನು ನಡೆಸಲಾಗಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top