News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಇನ್ನು ಮುಂದೆ ಹರಿಯಾಣದಲ್ಲಿ ಮದುವೆಗಾಗಿ ಮತಾಂತರ ಶಿಕ್ಷಾರ್ಹ ಅಪರಾಧ

ನವದೆಹಲಿ: ಇನ್ನು ಮುಂದೆ ಹರಿಯಾಣದಲ್ಲಿ ಮದುವೆಗಾಗಿ ಮತಾಂತರವಾಗಲು ಅವಕಾಶವಿಲ್ಲ. ಯಾರಾದರೂ ಈ ನಿಯಮವನ್ನು ಉಲ್ಲಂಘಿಸಿದರೆ, ಅವರಿಗೆ 3 ರಿಂದ 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಆ ರಾಜ್ಯದಲ್ಲಿ 4 ವರ್ಷಗಳಲ್ಲಿ 127 ಬಲವಂತದ ಮತಾಂತರ ಪ್ರಕರಣಗಳು ನಡೆದಿವೆ. ಅದರ ನಂತರ, ರಾಜ್ಯದ ಸಿಎಂ ಮನೋಹರ್ ಲಾಲ್ ಖಟ್ಟರ್ ನೇತೃತ್ವದ ಸರ್ಕಾರವು ಧರ್ಮ ಪರಿವರ್ತನೆ ತಡೆ  ಕಾನೂನನ್ನು ಜಾರಿಗೆ ತಂದಿದ್ದು, ಅದಕ್ಕೆ ಈಗ ರಾಜ್ಯಪಾಲರ ಅನುಮೋದನೆ ಸಿಕ್ಕಿದೆ.

ಈ ಬಗ್ಗೆ ಅಧಿಸೂಚನೆಯನ್ನೂ ಹೊರಡಿಸಲಾಗಿದೆ. ಇನ್ನು ಮುಂದೆ ಬಲವಂತದ ಮತಾಂತರಕ್ಕೊಳಗಾದ ಸಂತ್ರಸ್ತರು ನ್ಯಾಯಾಲಯದ ಮೆಟ್ಟಿಲು ಹತ್ತಲು ಸಾಧ್ಯವಾಗಲಿದೆ. ಸಂತ್ರಸ್ತೆ ಮತ್ತು ಆರೋಪಿಯ ಆದಾಯವನ್ನು ಗಮನದಲ್ಲಿಟ್ಟುಕೊಂಡು, ನ್ಯಾಯಾಲಯವು ನಿರ್ವಹಣೆ ಮತ್ತು  ವೆಚ್ಚದ ಆದೇಶಗಳನ್ನು ನೀಡಲು ಸಾಧ್ಯವಾಗಲಿದೆ.

ಬಲವಂತದ ಮತಾಂತರದ ನಂತರ ಮಗು ಜನಿಸಿದರೆ ಮತ್ತು ಮಹಿಳೆ ಅಥವಾ ಪುರುಷ ಮದುವೆಯಲ್ಲಿ ಸಂತೋಷ ಹೊಂದಿರದೇ ಇದ್ದರೆ ಇಬ್ಬರೂ ನ್ಯಾಯಾಲಯದ ಆಶ್ರಯ ಪಡೆಯಬಹುದು. ಮಗುವಿನ ಉತ್ತಮ ಭವಿಷ್ಯಕ್ಕಾಗಿ ಇಬ್ಬರೂ ಜೀವನಾಂಶವನ್ನು ಪಾವತಿಸಬೇಕೆಂದು ನ್ಯಾಯಾಲಯವು ಆದೇಶಿಸಬಹುದು. ಇದರಲ್ಲಿ, ಕಾಯಿದೆಯ ಸೆಕ್ಷನ್ 6 ರ ಅಡಿಯಲ್ಲಿ ಮದುವೆಯನ್ನು ಅಸಿಂಧು ಎಂದು ಘೋಷಿಸುವ ನಿಬಂಧನೆಯನ್ನು ಸಹ ಮಾಡಲಾಗಿದೆ.

ಬಲವಂತದ ಮತಾಂತರಕ್ಕೆ 1ರಿಂದ 5 ವರ್ಷಗಳವರೆಗೆ ಜೈಲು ಶಿಕ್ಷೆ, ಕನಿಷ್ಠ ಒಂದು ಲಕ್ಷ ರೂಪಾಯಿ ದಂಡ ವಿಧಿಸಲು ಅವಕಾಶವಿದೆ. ಮದುವೆಗಾಗಿ ಧರ್ಮ ಮುಚ್ಚಿಟ್ಟರೆ 3-10 ವರ್ಷ ಜೈಲು, ದಂಡವನ್ನು ಕನಿಷ್ಠ 3 ಲಕ್ಷ ರೂ ವಿಧಿಸಲಾಗುತ್ತದೆ.

ಸಾಮೂಹಿಕ ಮತಾಂತರಕ್ಕೆ 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಸ್ವ ಇಚ್ಛೆಯಿಂದ ಮತಾಂತರ ನಡೆದರೂ ಮೊದಲು ಜಿಲ್ಲಾ ಡಿಸಿಗೆ ಮಾಹಿತಿ ನೀಡಬೇಕು. ಅದರ ಮಾಹಿತಿಯನ್ನು ಡಿಸಿ ಕಚೇರಿಯ ಸೂಚನಾ ಫಲಕದಲ್ಲಿ ಅಂಟಿಸಲಾಗುತ್ತದೆ. ಆಕ್ಷೇಪಣೆ ಇದ್ದಲ್ಲಿ 30 ದಿನಗಳೊಳಗೆ ಲಿಖಿತವಾಗಿ ದೂರು ಸಲ್ಲಿಸಬಹುದು. ಮತಾಂತರದಲ್ಲಿ ನಿಯಮಗಳನ್ನು ಉಲ್ಲಂಘಿಸಲಾಗಿದೆಯೇ ಎಂಬುದನ್ನು ಡಿಸಿ ತನಿಖೆ ನಡೆಸಿ ತೀರ್ಮಾನಿಸಲಿದ್ದಾರೆ. ಉಲ್ಲಂಘನೆಯ ಸಂದರ್ಭದಲ್ಲಿ ಅನುಮೋದನೆಯನ್ನು ರದ್ದುಗೊಳಿಸಲಾಗುತ್ತದೆ. 30ರೊಳಗೆ ಡಿಸಿ ಆದೇಶದ ವಿರುದ್ಧ ವಿಭಾಗೀಯ ಆಯುಕ್ತರಿಗೆ ಮನವಿ ಸಲ್ಲಿಸಬಹುದು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top