News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕಳೆದ 6 ವರ್ಷದಲ್ಲಿ ಉಡಾನ್‌ ಅಡಿ 1.15 ಕೋಟಿ ಜನರಿಂದ ವಾಯು ಪ್ರಯಾಣ

ನವದೆಹಲಿ: ನಮ್ಮ ದೇಶದಲ್ಲಿ ವಿಮಾನ ಪ್ರಯಾಣವು ಕೈಗೆಟುಕುವ ದರದಲ್ಲಿ ಲಭ್ಯವಾಗುತ್ತಿದ್ದರೂ ಸಹ, ವಿಮಾನದಲ್ಲಿ ಪ್ರಯಾಣಿಸುವುದು ಇನ್ನೂ ಅನೇಕರಿಗೆ ಆಕಾಂಕ್ಷೆಯಾಗಿಯೇ ಉಳಿದಿದೆ. ಇದಕ್ಕೆ, ಪ್ರಮುಖ ಕಾರಣವೆಂದರೆ ವಿಮಾನ ನಿಲ್ದಾಣಗಳು ಅತ್ಯಂತ ದೂರದ ಪ್ರದೇಶಗಳಲ್ಲಿ ಇರುವುದು. ಇದನ್ನು ಮನಗಂಡು ಸರ್ಕಾರವು ಕ್ರಮ ತೆಗೆದುಕೊಳ್ಳುತ್ತಿದೆ, ಉಡಾನ್ ವಿಮಾನ ಯೋಜನೆಯಡಿ, ಹೊಸ ವಿಮಾನ ನಿಲ್ದಾಣಗಳು ಮತ್ತು ವಿಮಾನ ಮಾರ್ಗಗಳನ್ನು ಉದ್ಘಾಟಿಸಲಾಗುತ್ತಿದೆ.

ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಪ್ರಶ್ನೆಗಳಿಗೆ ಉತ್ತರಿಸಿದ ಸಿಂಧಿಯಾ, “ಉಡಾನ್ ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ, ಇದರ ಅಡಿಯಲ್ಲಿ ಕಳೆದ ಆರು ವರ್ಷಗಳಲ್ಲಿ ಸುಮಾರು 1.15 ಕೋಟಿ ಜನರು ಎಂದಿಗೂ ವಿಮಾನಯಾನ ಮಾಡದವರು ಪ್ರಯಾಣಿಸಿದ್ದಾರೆ ಎಂದಿದ್ದಾರೆ.

11 ಏರ್‌ಲೈನ್‌ಗಳು ಪ್ರಸ್ತುತ UDAN ನ ಭಾಗವಾಗಿದೆ, ಅವುಗಳಲ್ಲಿ ಮೂರು ಸ್ಟಾರ್ಟ್‌ಅಪ್‌ಗಳಾಗಿವೆ, ಆದರೆ 70 ಹೊಸ ವಿಮಾನ ನಿಲ್ದಾಣಗಳನ್ನು ಸ್ಥಾಪಿಸಲಾಗಿದೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.

“ಇವುಗಳ ಹೊರತಾಗಿ ನಾವು 2024 ರ ಅಂತ್ಯದ ವೇಳೆಗೆ 68 ಹೊಸ ವಿಮಾನ ನಿಲ್ದಾಣಗಳನ್ನು ನಾಗರಿಕ ವಿಮಾನಯಾನ ಕ್ಷೇತ್ರದ ವೈವಿಧ್ಯೀಕರಣಕ್ಕಾಗಿ ಸ್ಥಾಪಿಸಲಿದ್ದೇವೆ” ಎಂದಿದ್ದಾರೆ.

ನಾಗರಿಕ ವಿಮಾನಯಾನ ಸಚಿವಾಲಯವು ಪ್ರಾದೇಶಿಕ ಸಂಪರ್ಕ ಯೋಜನೆ (ಆರ್‌ಸಿಎಸ್) — ಉಡಾನ್ (ಉಡೇ ದೇಶ್ ಕಾ ಆಮ್ ನಾಗರಿಕ್) ಅನ್ನು ಅಕ್ಟೋಬರ್ 21, 2016 ರಂದು ಪ್ರಾರಂಭಿಸಿದ್ದು, ಪ್ರಾದೇಶಿಕ ವಾಯು ಸಂಪರ್ಕವನ್ನು ಉತ್ತೇಜಿಸುವ ಮತ್ತು ವಿಮಾನ ಪ್ರಯಾಣವನ್ನು ಜನಸಾಮಾನ್ಯರಿಗೆ ಕೈಗೆಟುಕುವಂತೆ ಮಾಡುವ ಉದ್ದೇಶವನ್ನು ಇದು ಒಳಗೊಂಡಿದೆ.

“ನವೆಂಬರ್ 30, 2022 ರಂತೆ, UDAN ಅಡಿಯಲ್ಲಿ ನಾಲ್ಕು ಸುತ್ತಿನ ಬಿಡ್ಡಿಂಗ್ ನಂತರ, 453 ಮಾರ್ಗಗಳು ಪ್ರಾರಂಭವಾಗಿವೆ, 2 ವಾಟರ್ ಏರೋಡ್ರೋಮ್ ಮತ್ತು 9 ಹೆಲಿಪೋರ್ಟ್‌ಗಳು ಸೇರಿದಂತೆ 70 ವಿಮಾನ ನಿಲ್ದಾಣಗಳನ್ನು ಕಾರ್ಯಗತಗೊಳಿಸಲಾಗಿದೆ. 2.15 ಲಕ್ಷಕ್ಕೂ ಹೆಚ್ಚು UDAN ವಿಮಾನಗಳು ಕಾರ್ಯನಿರ್ವಹಿಸಿವೆ ಮತ್ತು UDAN ವಿಮಾನಗಳಲ್ಲಿ ಇಲ್ಲಿಯವರೆಗೆ1.1 ಕೋಟಿ ಪ್ರಯಾಣಿಕರಿಗೆ ಲಾಭವಾಗಿದೆ. ಈ ಯೋಜನೆಯಡಿ ಕೈಗೆಟುಕುವ ದರದಲ್ಲಿ ಟೈರ್ -2 ಮತ್ತು ಟೈರ್ -3 ನಗರಗಳಿಗೆ ವಿಮಾನ ಸಂಪರ್ಕವನ್ನು ಒದಗಿಸಲು ಸಾಧ್ಯವಾಗಿದಘ ಮತ್ತು ಇದು ಜನರು ಪ್ರಯಾಣಿಸುವ ಮಾರ್ಗವನ್ನು ಮಾರ್ಪಡಿಸಿದೆ” ಎಂದು ಸಚಿವರು ಹೇಳಿದ್ದಾರೆ

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top