News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಈಶಾನ್ಯದಲ್ಲಿ ಶಾಂತಿಯ ಯುಗ ಪ್ರಾರಂಭವಾಗಿದೆ: ಅನುರಾಗ್‌ ಠಾಕೂರ್

ನವದೆಹಲಿ: ಈಶಾನ್ಯ ರಾಜ್ಯಗಳಲ್ಲಿ ದಂಗೆ ಮತ್ತು ಹಿಂಸಾಚಾರದಲ್ಲಿ ಕುಸಿತವಾಗಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು, ಈಶಾನ್ಯ ಪ್ರದೇಶದಲ್ಲಿ ಶಾಂತಿಯ ಯುಗ ಪ್ರಾರಂಭವಾಗಿದೆ ಎಂದು ಹೇಳಿದ್ದಾರೆ.

ಇಂದು ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್, ” ಈಶಾನ್ಯದಲ್ಲಿ ಈಗ ಶಾಂತಿಯ ಯುಗ ಪ್ರಾರಂಭವಾಗಿದೆ ಎಂದು ನಾನು ಹೇಳಬಲ್ಲೆ. 2014 ರ ನಂತರ ಈಶಾನ್ಯದಲ್ಲಿ ದಂಗೆ ಮತ್ತು ಹಿಂಸಾಚಾರದ ಪ್ರಕರಣಗಳು 80% ರಷ್ಟು ಕಡಿಮೆಯಾಗಿದೆ. ನಾಗರಿಕರ ಮರಣವು 89% ರಷ್ಟು ಕಡಿಮೆಯಾಗಿದೆ.  2014 ರ ನಂತರ ಈಶಾನ್ಯದಲ್ಲಿ ಸುಮಾರು 6,000 ಉಗ್ರಗಾಮಿಗಳು ಶರಣಾಗಿದ್ದಾರೆ. 2015 ರ ನಂತರ ಈಶಾನ್ಯದಲ್ಲಿ ಎಡಪಂಥೀಯ ಉಗ್ರವಾದಕ್ಕೆ (LWE) ಸಂಬಂಧಿಸಿದ ಘಟನೆಗಳಲ್ಲಿ 265% ಕುಸಿತ ಕಂಡುಬಂದಿದೆ” ಎಂದಿದ್ದಾರೆ.

ಈಶಾನ್ಯ ಪ್ರದೇಶದಲ್ಲಿನ ಅಭಿವೃದ್ಧಿ ನರೇಂದ್ರ ಮೋದಿ ಸರ್ಕಾರ ಆದ್ಯತೆಯಾಗಿದೆ ಎಂದ ಅವರಿ, ಗಡಿ ಪ್ರದೇಶಗಳನ್ನು ‘ಭದ್ರತೆ, ಸಮೃದ್ಧಿಯ ಹೆಬ್ಬಾಗಿಲು’ ಎಂದು ಮೋದಿ ಕರೆದಿದ್ದಾರೆ ಎಂದಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top