News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಾರತದ ಸಂತರು ‘ವಸುಧೈವ ಕುಟುಂಬಕಂ’ ಭಾವನೆ ಮೂಲಕ ಜಗತ್ತನ್ನು ಬೆಸೆದಿದ್ದಾರೆ: ಮೋದಿ

ನವದೆಹಲಿ: ಭಾರತದ ಸಂತರು ‘ವಸುಧೈವ ಕುಟುಂಬಕಂ’ ಎಂಬ ಭಾವನೆಯನ್ನು ಹುರಿದುಂಬಿಸುವ ಮೂಲಕ ಜಗತ್ತನ್ನು ಬೆಸೆದಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಅಹಮದಾಬಾದ್‌ನಲ್ಲಿ ನಡೆದ ಪ್ರಮುಖ್ ಸ್ವಾಮಿ ಮಹಾರಾಜ್ ಶತಾಬ್ದಿ ಮಹೋತ್ಸವದ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಭಾರತೀಯ ಸಂತ ಸಂಪ್ರದಾಯಗಳು ಕೇವಲ ಸಂಸ್ಕೃತಿ, ಧರ್ಮ, ನೀತಿ ಮತ್ತು ಸಿದ್ಧಾಂತಗಳ ಪ್ರಚಾರಕ್ಕೆ ಸೀಮಿತವಾಗಿಲ್ಲ. ಭಾರತೀಯ ಸಂತರು ಸಂಕುಚಿತ ಪಂಗಡಗಳನ್ನು ಮೀರಿ ವಸುಧೈವ ಕುಟುಂಬಕಂ ಎಂಬ ಕಲ್ಪನೆಯನ್ನು ಬಲಗೊಳಿಸಿ ಜಗತ್ತನ್ನು ಒಂದುಗೂಡಿಸುವ ಕೆಲಸ ಮಾಡಿದ್ದಾರೆ ಎಂದರು.

ಸ್ವಾಮಿ ಮಹಾರಾಜರು ಸೇರಿದಂತೆ ಭಾರತದ ಮಹಾನ್ ಸಂತರು ಸ್ಥಾಪಿಸಿದ ‘ವಸುಧೈವ ಕುಟುಂಬಕಂ’ ಭಾವವನ್ನು ಒತ್ತಿ ಹೇಳಿದ ಪ್ರಧಾನಿ, ವೇದದಿಂದ ವಿವೇಕಾನಂದರವರೆಗಿನ ಪಯಣವನ್ನು ಇಂದು ಈ ಶತಮಾನೋತ್ಸವ ಸಂಭ್ರಮದಲ್ಲಿ ಕಣ್ತುಂಬಿಕೊಳ್ಳಬಹುದು ಎಂದು ಹೇಳಿದರು.

“ಪ್ರಮುಖ್ ಸ್ವಾಮಿ ಮಹಾರಾಜ್ ಅವರು ತಮ್ಮ  ಸೇವೆ, ನಮ್ರತೆ ಮತ್ತು ಬುದ್ಧಿವಂತಿಕೆಯಿಂದ ಪ್ರಪಂಚದಾದ್ಯಂತ ಅಸಂಖ್ಯಾತ ಜನರನ್ನು ತಲುಪಿದ್ದಾರೆ. ಪ್ರಮುಖ್ ಸ್ವಾಮಿ ಮಹಾರಾಜರ ಅಚ್ಚುಮೆಚ್ಚಿನ ನೆನಪುಗಳನ್ನು ಮತ್ತು ಮಾನವೀಯತೆಗೆ ಅವರ ಸೇವೆಯ ಸಂದೇಶ ಸ್ಮರಣೀಯ. ಅವರು ಮನುಕುಲದ ಸೇವೆಯನ್ನು ನಂಬಿದ್ದರು ಮತ್ತು ಪ್ರತಿಯೊಬ್ಬರ ಜೀವನದ ಅಂತಿಮ ಗುರಿ ‘ಸೇವೆ’ ಎಂದು ಹೇಳುತ್ತಿದ್ದರು” ಎಂದಿದ್ದಾರೆ.

ಈ ಭವ್ಯ ಕಾರ್ಯಕ್ರಮವು ಜಗತ್ತನ್ನು ಆಕರ್ಷಿಸುವುದಲ್ಲದೆ ಮುಂಬರುವ ಪೀಳಿಗೆಗೆ ಸ್ಫೂರ್ತಿ ಮತ್ತು ಪ್ರಭಾವವನ್ನು ನೀಡುತ್ತದೆ ಎಂದು  ಮೋದಿ ಹೇಳಿದರು.

ಅಹಮದಾಬಾದ್‌ನ ಓಗ್ನಾಜ್ ಬಳಿ 600 ಎಕರೆ ಪ್ರದೇಶದಲ್ಲಿ ಬೃಹತ್ ‘ಪ್ರಮುಖ್ ಸ್ವಾಮಿ ನಗರ’ ಸ್ಥಾಪಿಸಲಾಗಿದೆ. ಇಂದಿನಿಂದ ಮುಂದಿನ ವರ್ಷದ ಜನವರಿ 15 ರವರೆಗೆ ಅದ್ಧೂರಿ ಆಚರಣೆ ನಡೆಯಲಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top