ತಿರುವಂತಪುರಂ: ವಿವಾಹ ಸಮಾರಂಭ ಎಂಬುದು ಎಲ್ಲರ ಜೀವನದಲ್ಲಿ ಒಂದು ಪ್ರಮುಖ ಕ್ಷಣವಾಗಿರುತ್ತದೆ. ಯಾವೆಲ್ಲಾ ಅತಿಥಿಗಳನ್ನು ಕರೆಯಬೇಕು, ಆಮಂತ್ರಣ ಪತ್ರಿಕೆ ವಿನ್ಯಾಸ ಹೇಗಿರಬೇಕು, ಎಷ್ಟು ಅದ್ಧೂರಿಯಾಗಿ ಮದುವೆ ನೆರವೇರಿಸಬೇಕು ಎಂಬಿತ್ಯಾದಿ ವಿಷಯಗಳನ್ನು ಮೊದಲೇ ನಿಗದಿಪಡಿಸಲಾಗುತ್ತದೆ. ಆದರೆ ಕೆಲವರು ತಮ್ಮ ವಿವಾಹದಲ್ಲಿ ಮಾದರಿಯಾಗುವ ಕಾರ್ಯ ಮಾಡಿ ಎಲ್ಲರ ಮೆಚ್ಚುಗೆ ಗಳಿಸುತ್ತಾರೆ. ಅದರಂತೆ ಕೇರಳದ ದಂಪತಿಗಳು ಭಾರತೀಯ ಸೇನೆಗೆ ಮದುವೆಯ ಆಹ್ವಾನವನ್ನು ಕಳುಹಿಸುವ ಮೂಲಕ ಎಲ್ಲರ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ಆಮಂತ್ರಣದ ಜೊತೆಗೆ, ದಂಪತಿಗಳಾದ ರಾಹುಲ್ ಮತ್ತು ಕಾರ್ತಿಕಾ ಅವರು ಸೇನಾ ಸಿಬ್ಬಂದಿಗೆ ಸಂದೇಶವನ್ನು ಸಹ ಕಳುಹಿಸಿದ್ದಾರೆ ಅದು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
“ಆತ್ಮೀಯ ವೀರರೇ, ನಾವು ನವೆಂಬರ್ 10 ರಂದು ಮದುವೆಯಾಗುತ್ತಿದ್ದೇವೆ. ನಮ್ಮ ದೇಶದ ಮೇಲಿನ ಪ್ರೀತಿ, ದೃಢತೆ ಮತ್ತು ದೇಶಭಕ್ತಿಗೆ ನಾವು ನಿಮಗೆ ನಿಜವಾಗಿಯೂ ಕೃತಜ್ಞರಾಗಿರುತ್ತೇವೆ. ನಮ್ಮನ್ನು ಸುರಕ್ಷಿತವಾಗಿರಿಸಿದ್ದಕ್ಕಾಗಿ ನಾವು ನಿಮಗೆ ಋಣಿಯಾಗಿದ್ದೇವೆ. ನಿಮ್ಮಿಂದ ನಾವು ಶಾಂತಿಯುತವಾಗಿ ನಿದ್ರಿಸುತ್ತಿದ್ದೇವೆ. ನಮ್ಮ ಪ್ರೀತಿಪಾತ್ರರ ಜೊತೆ ನಮಗೆ ಸಂತೋಷದ ದಿನಗಳನ್ನು ಕಳೆಯಲು ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮಿಂದ ನಾವು ಸಂತೋಷದಿಂದ ಮದುವೆಯಾಗುತ್ತಿದ್ದೇವೆ. ನಾವು ನಮ್ಮ ವಿಶೇಷ ದಿನದಂದು ನಿಮ್ಮನ್ನು ಆಹ್ವಾನಿಸಲು ತುಂಬಾ ಸಂತೋಷಪಡುತ್ತಿದ್ದೇವೆ. ನಿಮ್ಮ ಉಪಸ್ಥಿತಿ ಮತ್ತು ಆಶೀರ್ವಾದವನ್ನು ನಾವು ಬಯಸುತ್ತೇವೆ” ಎಂದು ಬರೆದಿದ್ದಾರೆ.
ಈ ಆಹ್ವಾನವನ್ನು ಭಾರತೀಯ ಸೇನೆಯು ಶುಕ್ರವಾರ ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಹಂಚಿಕೊಂಡಿದೆ. ಇನ್ಸ್ಟಾಗ್ರಾಮ್ನಲ್ಲಿ ಚಿತ್ರವನ್ನು ಹಂಚಿಕೊಂಡ ಸೇನೆ, “ಶುಭಾಶಯಗಳು. ಭಾರತೀಯ ಸೇನೆ ಮದುವೆಯ ಆಹ್ವಾನಕ್ಕಾಗಿ ರಾಹುಲ್ ಮತ್ತು ಕಾರ್ತಿಕಾ ಅವರಿಗೆ ಧನ್ಯವಾದಗಳನ್ನು ತಿಳಿಸುತ್ತದೆ ಮತ್ತು ದಂಪತಿಗಳಿಗೆ ಸಂತೋಷದ ಮತ್ತು ಆನಂದದಾಯಕ ವಿವಾಹ ಜೀವನವನ್ನು ಬಯಸುತ್ತದೆ. ಒಟ್ಟಿಗೆ ಇರಿ ಎಂದೆಂದಿಗೂ” ಎಂದು ಬರೆದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.