ನವದೆಹಲಿ: ಬ್ರಿಟಿಷರ ವಿರುದ್ಧ ಎಚ್ಚೆದೆಯಿಂದ ಹೋರಾಡಿದ ಝಾನ್ಸಿ ರಾಣಿ ಲಕ್ಷ್ಮಿಬಾಯಿ ಅವರ 187 ನೇ ಜನ್ಮ ವಾರ್ಷಿಕೋತ್ಸವವನ್ನು ಇಂದು ಆಚರಿಸಲಾಗುತ್ತಿದ್ದು, ರಾಜಕೀಯ ಕ್ಷೇತ್ರದ ಪ್ರಮುಖ ನಾಯಕರು ವೀರ ರಾಣಿಗೆ ಗೌರವಾರ್ಪಣೆ ಮಾಡಿದರು.
1835 ರಲ್ಲಿ ಮಣಿಕರ್ಣಿಕಾ ತಾಂಬೆಯಾಗಿ ಜನಿಸಿದ ಝಾನ್ಸಿಯ ರಾಣಿಯ ಕೊಡುಗೆಯನ್ನು ಸ್ಮರಿಸಿ ಟ್ವಿಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, “ರಾಣಿ ಲಕ್ಷ್ಮೀಬಾಯಿ ಅವರ ಧೈರ್ಯ ಮತ್ತು ನಮ್ಮ ದೇಶಕ್ಕೆ ಅವರ ಅನನ್ಯ ಕೊಡುಗೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ವಸಾಹತುಶಾಹಿ ಆಳ್ವಿಕೆಯನ್ನು ದೃಢವಾಗಿ ವಿರೋಧಿಸುವ ಮೂಲಕ ಆಕೆ ಸ್ಫೂರ್ತಿಯ ಮೂಲವಾದಳು” ಎಂದಿದ್ದಾರೆ.
ಲಕ್ಷ್ಮೀಬಾಯಿಯವರ ಜನ್ಮದಿನದ ನೆನಪಿಗಾಗಿ ಕಳೆದ ವರ್ಷ ಇದೇ ದಿನದಂದು ಅವರು ಝಾನ್ಸಿಗೆ ಭೇಟಿ ನೀಡಿದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ರಾಷ್ಟ್ರದ ಬಗೆಗಿನ ಆಕೆಯ ಸಮರ್ಪಣೆ ಭಾರತೀಯರಿಗೆ ಸದಾ ಸ್ಫೂರ್ತಿ ನೀಡುತ್ತದೆ ಎಂದು ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಹೇಳಿದ್ದಾರೆ. “ತಮ್ಮ ಹೋರಾಟ ಮತ್ತು ದೃಢಸಂಕಲ್ಪದಿಂದ, ಅದಮ್ಯ ಧೈರ್ಯ, ತ್ಯಾಗ ಮತ್ತು ಸ್ತ್ರೀಶಕ್ತಿಯ ಮೂರ್ತರೂಪವಾದ ಝಾನ್ಸಿ ರಾಣಿ ಲಕ್ಷ್ಮಿ ಬಾಯಿ ಬ್ರಿಟಿಷರ ಆಳ್ವಿಕೆಯ ಬೇರುಗಳನ್ನು ಅಲ್ಲಾಡಿಸಿದರು” ಎಂದು ಅವರು ಬರೆದಿದ್ದಾರೆ.
Remembering Rani Lakshmibai on her Jayanti. Her courage and monumental contribution to our nation can never be forgotten. She is a source of inspiration for her steadfast opposition to colonial rule. Sharing glimpses from my visit to Jhansi on this day last year. pic.twitter.com/76oWhwL9bn
— Narendra Modi (@narendramodi) November 19, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.