ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಅಡಾಲ್ಫ್ ಹಿಟ್ಲರ್ಗೆ ಹೋಲಿಸುವ ಪೋಸ್ಟರ್ ಅನ್ನು ದೆಹಲಿ ಬಿಜೆಪಿ ಪ್ರಧಾನ ಕಚೇರಿಯ ಹೊರಗೆ ಬಿಜೆಪಿ ನಾಯಕ ತೇಜಿಂದರ್ ಪಾಲ್ ಸಿಂಗ್ ಬಗ್ಗಾ ಅಳವಡಿಸಿದ್ದಾರೆ.
ರಾಷ್ಟ್ರ ರಾಜಧಾನಿಯ ವಾಯು ಗುಣಮಟ್ಟ ಸೂಚ್ಯಂಕ ಶುಕ್ರವಾರ 450 ರ ಗಡಿಯನ್ನು ದಾಟಿ ಆತಂಕ ಸೃಷ್ಟಿಸಿದೆ. ಗಾಳಿಯ ಗುಣಮಟ್ಟವು ತೀವ್ರ ಕುಸಿದಿದ್ದರೂ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಾತ್ರ ಯಾವುದೇ ಕ್ರಮಕೈಗೊಳ್ಳದೆ ಸಮ್ಮನಿದ್ದಾರೆಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಕೇಜ್ರಿವಾಲ್ ಅವರನ್ನು ಟೀಕಿಸುವ ಪೋಸ್ಟರ್ ಅನ್ನು ಬಿಜೆಪಿ ಹೊರಗಡೆ ಹಾಕಲಾಗಿದೆ. ಜರ್ಮನ್ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಜೊತೆಗೆ ಕೇಜ್ರಿವಾಲ್ ಅವರ ಫೋಟೋವನ್ನು ಹೊಂದಿರುವ ಪೋಸ್ಟರ್ನಲ್ಲಿ, “ಕೇಜ್ರಿವಾಲ್ ಅವರು ತಮ್ಮ ನಗರವನ್ನು ಗ್ಯಾಸ್ ಚೇಂಬರ್ ಆಗಿ ಪರಿವರ್ತಿಸಿದ ಎರಡನೇ ಆಡಳಿತಗಾರ, ಹಿಟ್ಲರ್ ಮೊದಲಿಗ” ಎಂದು ಬರೆಯಲಾಗಿದೆ.
ಪೋಸ್ಟರ್ ಕುರಿತು ಮಾತನಾಡಿದ ಬಿಜೆಪಿ ನಾಯಕ ಬಗ್ಗಾ, “ದೆಹಲಿಯ ಸಿಎಂ ರಾಜಕೀಯ ಪ್ರವಾಸದಲ್ಲಿದ್ದಾರೆ, ಆದರೆ ದೆಹಲಿಯಲ್ಲಿ ವಾಯು ಮಾಲಿನ್ಯದಿಂ ಜನರು ಹೆಣಗಾಡುತ್ತಿದ್ದಾರೆ. ಅವರು ದೆಹಲಿಯನ್ನು ಗ್ಯಾಸ್ ಚೇಂಬರ್ ಆಗಿ ಪರಿವರ್ತಿಸಿದ್ದಾರೆ. ಜನರು ಮಾಲಿನ್ಯದಿಂದ ಸಾಯುತ್ತಿದ್ದಾರೆ ಆದರೆ ಅವರು ರಾಜಕೀಯ ಪ್ರವಾಸದಲ್ಲಿದ್ದಾರೆ” ಎಂದು ಆರೋಪಿಸಿದ್ದಾರೆ.
ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ದೆಹಲಿ ಸಿಎಂ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿ, ಕೇಜ್ರಿವಾಲ್ ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾರೆ, ಆದ್ದರಿಂದ ದೆಹಲಿಯ ಜನರು ಮಾಲಿನ್ಯದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮುಖವಾಡಗಳನ್ನು ಧರಿಸಬೇಕು ಎಂದು ಕರೆ ನೀಡಿದ್ದಾರೆ.
दिल्ली की जनता से आग्रह है की मास्क पहनें और वायु प्रदूषण से स्वयं की रक्षा करें क्योंकि केजरीवाल जी गुजरात और हिमाचल में मुफ्त की रेवड़ी से जुड़े वादे करने और दिल्ली की जनता के टैक्स के करोड़ों रुपयों के खर्चे से विज्ञापन देने में व्यस्त हैं। https://t.co/gSmw4yvv6G
— Dr Mansukh Mandaviya (@mansukhmandviya) November 4, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.