ಭೋಪಾಲ್: ʼಭಾರತ್ ಮಾತಾ ಕೀ ಜೈʼ ಎಂದು ಘೋಷಣೆ ಕೂಗಿದ ವಿದ್ಯಾರ್ಥಿಯೊಬ್ಬನನ್ನು ಶಿಕ್ಷಕರು ಥಳಿಸಿದ ಘಟನೆ ಮಧ್ಯಪ್ರದೇಶದ ಗುಣಾ ಜಿಲ್ಲೆಯಲ್ಲಿ ನಡೆದಿದೆ.
ಮಧ್ಯಪ್ರದೇಶದಕ್ರೈಸ್ಟ್ ಸೀನಿಯರ್ ಸೆಕೆಂಡರಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ವಿದ್ಯಾರ್ಥಿಯ ಪೋಷಕರು ಮತ್ತು ಕೆಲವು ಸಂಘಟನೆಗಳು ಶಾಲಾ ಆವರಣದ ಹೊರಗೆ ಘಟನೆ ಖಂಡಿಸಿ ಬೃಹತ್ ಪ್ರತಿಭಟನೆ ನಡೆಸಿವೆ. ಇಬ್ಬರು ಶಾಲಾ ಶಿಕ್ಷಕರ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ವಿದ್ಯಾರ್ಥಿಯನ್ನು ಶಿವಾಂಶ್ ಜೈನ್ ಎಂದು ಗುರುತಿಸಲಾಗಿದೆ.
“ನಾವು ಬೆಳಿಗ್ಗೆ ಅಸೆಂಬ್ಲಿಗಾಗಿ ಮೈದಾನಕ್ಕೆ ಹೋದಾಗ ರಾಷ್ಟ್ರಗೀತೆ ಮುಗಿದ ನಂತರ ನಾನು ‘ಭಾರತ್ ಮಾತಾ ಕಿ ಜೈ’ ಎಂದು ಘೋಷಣೆ ಕೂಗಿದೆ, ಅಷ್ಟರಲ್ಲಿ ಜಸ್ಟಿನ್ ಸರ್ ಬಂದು ನನ್ನನ್ನು ಎಳೆದರು. ಕಾಲರ್ ಹಿಡಿದು ಬೈದರು. ನನ್ನನ್ನು ಸಾಲಿನಿಂದ ಹೊರಗೆ ಎಳೆದುಕೊಂಡು ಹೋದರು” ಎಂದು ಬಾಲಕ ಹೇಳಿದ್ದಾರೆ.
“ಬಳಿಕ ತರಗತಿಯಲ್ಲಿ ಕ್ಲಾಸ್ ಟೀಚರ್ ನನಗೆ ಬೈದು ʼಭಾರತ್ ಮಾತಾ ಕೀ ಜೈʼ ಎಂದು ಶಾಲೆಯಲ್ಲಿ ಅಲ್ಲ, ಮನೆಯಲ್ಲಿ ಹೇಳಬೇಕು ಎಂದು ಗದರಿಸಿ ನೆಲದ ಮೇಲೆ ಕೂರಿಸಿದರು. ಸುಮಾರು ನಾಲ್ಕು ಪಿರೇಡ್ ನನ್ನನ್ನು ನೆಲದ ಮೇಲೆ ಕೂರಿಸಲಾಯಿತು” ಎಂದಿದ್ದಾನೆ.
ಶಿವಾಂಶ್ನ ತಾಯಿ ಮಾತನಾಡಿ, “ಅವನು ಮನೆಗೆ ಬಂದು ಕೋಣೆಗೆ ಬೀಗ ಹಾಕಿ ಆಹಾರ ಸೇವಿಸದೆ ಅಳಲು ಪ್ರಾರಂಭಿಸಿದ್ದಾನೆ. ಬಳಿಕ ನಡೆದ ಇಡೀ ಘಟನೆಯನ್ನು ವಿವರಿಸಿದ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.