ನವದೆಹಲಿ: ನವೆಂಬರ್ 29 ರಿಂದ 7ನೇ ಆವೃತ್ತಿಯ ಕಾರ್ನೆಗಿ ಇಂಡಿಯಾ ಗ್ಲೋಬಲ್ ಟೆಕ್ನಾಲಜಿ ಶೃಂಗಸಭೆ ಆರಂಭಗೊಳ್ಳುತ್ತಿದೆ. ಇದಕ್ಕೆ ಈಗಾಗಲೇ ಭರದ ಸಿದ್ಧತೆಗಳು ಆರಂಭವಾಗಿದೆ.
ವಿದೇಶಾಂಗ ವ್ಯವಹಾರ ಸಚಿವಾಲಯ ಹಾಗೂ ಭಾರತ ಸರ್ಕಾರದ ಸಹಭಾಗಿತ್ವದಲ್ಲಿ ಈ ಶೃಂಗಸಭೆ ಆಯೋಜನೆಗೊಂಡಿದ್ದು, ಕರ್ನಾಟಕ ಸರ್ಕಾರ ಹಾಗೂ ಭಾರತದ ಹಲವು ತಂತ್ರಜ್ಞಾನ ಸಂಸ್ಥೆಗಳು ಬೆಂಬಲಿಸಲಿವೆ.
ಜಿಯೋಪಾಲಿಟಿಕ್ಸ್ ಆಫ್ ಟೆಕ್ನಾಲಜಿ ಅಡಿಯಲ್ಲಿ ಕಾರ್ನೆಗಿ ಇಂಡಿಯಾ ಗ್ಲೋಬಲ್ ಟೆಕ್ನಾಲಜಿ ಶೃಂಗಸಭೆ ನಡೆಯಲಿದೆ ಎಂದು ವರದಿಗಳು ತಿಳಿಸಿವೆ
ನವೆಂಬರ್ 29 ರಿಂದ ಆರಂಭಗೊಳ್ಳಲಿರುವ ಈ ಶೃಂಗಸಭೆ ಡಿಸೆಂಬರ್ 1ರ ವರೆಗೆ ನಡೆಯಲಿದೆ. ಟೆಕ್ನಾಲಜಿ ಪಾಲಿಸಿ, ಸೈಬರ್ ಸ್ಥಿತಸ್ಥಾಪಕತ್ವ, ಡಿಜಿಟಲ್ ಆರೋಗ್ಯ, ಡಿಜಿಟಲ್ ಮೂಲಸೌಕರ್ಯ, ಸೆಮಿಕಂಡಕ್ಟರ್, ಭಾರತದ G20 ಅಧ್ಯಕ್ಷತೆ ಸೇರಿದಂತೆ ಹಲವು ವಿಷಯಗಳು ಕುರಿತು ಇಲ್ಲಿ ವಿಚಾರ ವಿನಿಮಯವಾಗಲಿದೆ.
ಇಂಡಿಯಾ ಜಿ20 ಶೆರ್ಫಾದ ಅಮಿತಾಬ್ ಕಾಂತ್, ಕೇಂದ್ರ ಸರ್ಕಾರ ಪ್ರಧಾನ ವೈಜ್ಞಾನಿಕ ಸಲಹೆಗಾರ ಅಜಯ್ ಕುಮಾರ್ ಸೂದ್, ಜಪಾನ್ನ ಆರ್ಥಿಕ ಭದ್ರತಾ ಸಚಿವ ಸನೇ ತಕೈಚಿ, ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಸಿಇಒ ಆರ್ಎಸ್ ಶರ್ಮಾ, ಇಂಟೆಲ್ ಕಾರ್ಪೋರೇಶನ್ನ ಭಾರತದ ಮುಖ್ಯಸ್ಥ ನಿವ್ರುತಿ ರೈ, ಮೈಕ್ರೋಸಾಫ್ಟ್ ಎಷ್ಯಾ ಪ್ರಾದೇಶಿ ನಿರ್ದೇಶಕ (ಸರ್ಕಾರಿ ವ್ಯವಹಾರಗಳು ಮತ್ತು ಸಾರ್ವಜನಿಕ ನೀತಿ) ಮಾರ್ಕಸ್ ಬೇರ್ಟ್ಲಿ ಜಾನ್ಸ್, ಮೆಟಾದ ಗೌಪ್ಯತೆ ನೀತಿ ನಿರ್ದೇಶಕ ಮೆಲಿಂದಾ ಕ್ಲೇಬಾಗ್, UNICEF ಸಹ ಸಂಸ್ಥಾಪಕ ಹಾಗೂ ಸಂಯೋಜಕ ಡಿಜಿಟಲ್ ಹೆಲ್ತ್ ಸೆಂಟರ್ ಆಫ್ ಎಕ್ಸಲೆನ್ಸ್ ಸೀನ್ ಬ್ಲಾಷ್ಕೆ, ವಿಶ್ವಸಂಸ್ಥೆಯ ತಂತ್ರಜ್ಞಾನದ ಮುಖ್ಯ ರಾಯಭಾರಿಯಾಗಿರುವ ಅಮನದೀಪ್ ಸಿಂಗ್ ಗಿಲ್ ಈ ಶೃಂಗಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗಿಯಾಗಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.