ನವದೆಹಲಿ: ಕೇಂದ್ರ ವಿದೇಶಾಂಗ ಸಚಿವ ಡಾ ಎಸ್ ಜೈಶಂಕರ್ ಅವರು ಭಾನುವಾರ ದಕ್ಷಿಣ ಅಮೆರಿಕಾದ ಪರಾಗ್ವೆಯಲ್ಲಿ ಸ್ಥಾಪಿಸಲಾದ ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ಅನಾವರಣಗೊಳಿಸಿದರು. ಈ ಪ್ರತಿಮೆಯನ್ನು ಕಲ್ಲಿನಿಂದ ರಚಿಸಲಾಗಿದೆ.
ಈ ಸಂದರ್ಭದಲ್ಲಿ ಜೈ ಶಂಕರ್ ಅವರು ಮಾತನಾಡಿ, ನಗರದ ಪ್ರಮುಖ ವಾಟರ್ ಫ್ರಂಟ್ ಅಲ್ಲಿ ಗಾಂಧಿ ಪ್ರತಿಮೆ ಸ್ಥಾಪಿಸಲು ಅಸುನ್ಸಿಯಾನ್ ಪುರಸಭೆ ತೆಗೆದುಕೊಂಡ ನಿರ್ಧಾರವನ್ನು ಶ್ಲಾಘಿಸಿದರು.
ಜೈಶಂಕರ್ ಅವರು ಪ್ರಸ್ತುತ ದಕ್ಷಿಣ ಅಮೆರಿಕಾಕ್ಕೆ ತಮ್ಮ ಮೊದಲ ಅಧಿಕೃತ ಭೇಟಿಯಲ್ಲಿದ್ದಾರೆ. ಟ್ವಿಟ್ ಮೂಲಕ ಅವರು ಪ್ರತಿಮೆ ಅನಾವರಣದ ಸನ್ನಿವೇಶಗಳನ್ನು ಹಂಚಿಕೊಂಡಿದ್ದಾರೆ.
ಇದರ ನಂತರ, ಅವರು ಐತಿಹಾಸಿಕ ಕಾಸಾ ಡೆ ಲಾ ಇಂಡಿಪೆಂಡೆನ್ಸಿಯಾಕ್ಕೆ ಭೇಟಿ ನೀಡಿದರು, ಇಲ್ಲಿ ಎರಡು ಶತಮಾನಗಳಿಗಿಂತ ಹಿಂದೆ ಪರಾಗ್ವೆಯ ಸ್ವಾತಂತ್ರ್ಯ ಚಳುವಳಿ ಪ್ರಾರಂಭವಾಯಿತು. ಅಲ್ಲಿನ ವಸ್ತುಸಂಗ್ರಹಾಲಯದ ಚಿತ್ರಗಳನ್ನು ಹಂಚಿಕೊಂಡ ಅವರು, ಎರಡೂ ದೇಶಗಳ ನಡುವಿನ ಬಾಂಧವ್ಯವನ್ನು ಶ್ಲಾಘಿಸಿದರು.
ಎಸ್ ಜೈಶಂಕರ್ ಅವರು ಬ್ರೆಜಿಲ್, ಪರಾಗ್ವೆ ಮತ್ತು ಅರ್ಜೆಂಟೀನಾ ಸೇರಿದಂತೆ ಮೂರು ದಕ್ಷಿಣ ಅಮೆರಿಕಾದ ರಾಷ್ಟ್ರಗಳಿಗೆ ಆಗಸ್ಟ್ 22-27 ರವರೆಗೆ ಮೂರು ದಿನಗಳ ಅಧಿಕೃತ ಭೇಟಿಯಲ್ಲಿದ್ದಾರೆ.
ಅವರ ಭೇಟಿಯ ಭಾಗವಾಗಿ, ಎಲ್ಲಾ ಮೂರು ದೇಶಗಳಲ್ಲಿನ ಉನ್ನತ ನಾಯಕತ್ವದೊಂದಿಗೆ ಸಭೆ ನಡೆಸಲಿದ್ದಾರೆ. ಪರಾಗ್ವೆಯಲ್ಲಿ ಅವರು ವಿದೇಶಾಂಗ ಸಚಿವಾಲಯದ ವತಿಯಿಂದ ಹೊಸದಾಗಿ ತೆರೆಯಲಾದ ಭಾರತೀಯ ರಾಯಭಾರ ಕಚೇರಿಯ ಆವರಣವನ್ನು ಸಹ ಉದ್ಘಾಟಿಸಲಿದ್ದಾರೆ. ನಂತರ ಬ್ರೆಜಿಲ್ ಮತ್ತು ಅರ್ಜೆಂಟೀನಾ ಭೇಟಿಯ ಸಮಯದಲ್ಲಿ ಅವರು ಜಂಟಿ ಆಯೋಗದ ಸಭೆ (ಜೆಸಿಎಂ)ಗಳಲ್ಲಿ ಭಾಗಿಯಾಗಲಿದ್ದಾರೆ.
Honoured to unveil a bust of Mahatma Gandhi ji in Asuncion, Paraguay.
Appreciate the Asuncion Municipality’s decision to locate it at the prominent waterfront of the city.
This is a statement of solidarity that was so strongly expressed during the Covid pandemic. pic.twitter.com/LiK4h3F4Xx
— Dr. S. Jaishankar (@DrSJaishankar) August 21, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.