News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕೃಷಿ ಉಡಾನ್‌ 2.0 ಅಡಿ ಯೋಜನೆಗೆ 58 ವಿಮಾನ ನಿಲ್ದಾಣಗಳ ಸೇರ್ಪಡೆ

ನವದೆಹಲಿ: ದೇಶದ 58 ವಿಮಾನ ನಿಲ್ದಾಣಗಳನ್ನು ಕೃಷಿ ಉಡಾನ್ 2.0 ಯೋಜನೆಯಡಿ ಸೇರಿಸಲಾಗಿದೆ, ಕೃಷಿ ಉತ್ಪನ್ನಕ್ಕೆ ಉತ್ತಮ ಮೌಲ್ಯ ನೀಡುವಲ್ಲಿ ಯೋಜನೆ ಸಹಕಾರಿಯಾಗಿದೆ.

ಕೃಷಿ ಉತ್ಪನ್ನಗಳು ಮತ್ತು ಹಾಳಾಗುವ ಸರಕುಗಳ ವಾಯು ಸಾಗಾಣೆಗೆ ಉತ್ತೇಜನವನ್ನು ನೀಡಲು  58 ವಿಮಾನ ನಿಲ್ದಾಣಗಳನ್ನು ಕೃಷಿ ಉಡಾನ್ ಯೋಜನೆಯ ಎರಡನೇ ಆವೃತ್ತಿಯ ಅಡಿಯಲ್ಲಿ ಸೇರಿಸಲಾಗಿದೆ ಎಂದು ಸಂಸತ್ತಿಗೆ ಮಾಹಿತಿ ನೀಡಲಾಗಿದೆ.

ಗುರುವಾರ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ನಾಗರಿಕ ವಿಮಾನಯಾನ ರಾಜ್ಯ ಸಚಿವ ವಿ ಕೆ ಸಿಂಗ್ ಅವರು ಈ ಮಾಹಿತಿಯನ್ನು ನೀಡಿದ್ದಾರೆ.

ಕೃಷಿ ಉತ್ಪನ್ನಗಳನ್ನು ಸಾಗಿಸಲು ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಾರ್ಗಗಳಲ್ಲಿ ಕೃಷಿ ಉಡಾನ್ ಯೋಜನೆಯನ್ನು ಆಗಸ್ಟ್ 2020 ರಲ್ಲಿ ಪ್ರಾರಂಭಿಸಲಾಗಿದೆ. ಅಸ್ತಿತ್ವದಲ್ಲಿರುವ ನಿಬಂಧನೆಗಳನ್ನು ಹೆಚ್ಚಿಸುವ ಮೂಲಕ ಮತ್ತು ಮುಖ್ಯವಾಗಿ ಈಶಾನ್ಯ ಗುಡ್ಡಗಾಡು ಪ್ರದೇಶಗಳಿಂದ, ಬುಡಕಟ್ಟು ಪ್ರದೇಶಗಳಿಂದ ಹಾಳಾಗುವ ಆಹಾರ ಉತ್ಪನ್ನಗಳನ್ನು ಸಾಗಿಸಲು ಮೂಲಕ ಕೃಷಿ ಉಡಾನ್ ಯೋಜನೆ 2.0 ಅನ್ನು ಅಕ್ಟೋಬರ್ 2021 ರಲ್ಲಿ ಘೋಷಿಸಲಾಯಿತು.

ಈ ಯೋಜನೆಯು ಕೃಷಿ ಉತ್ಪನ್ನಗಳನ್ನು ಸಾಗಿಸಲು ರೈತರಿಗೆ ಸಹಾಯ ಮಾಡುತ್ತದೆ. ಇದರಿಂದ ಅದು ಅವರು ತಮ್ಮ ಉತ್ಪನ್ನಗಳಿಗೆ ಸಮರ್ಪಕ  ಮೌಲ್ಯ ಪಡೆಯಲು ಸಹಾಯವಾಗುತ್ತಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top