ನವದೆಹಲಿ: ಹೊಸ ಸಂಸತ್ತಿನ ಕಟ್ಟಡದ ಮೇಲಿರುವ ರಾಷ್ಟ್ರೀಯ ಲಾಂಛನದ ಫೋಟೋಗಳು ಮತ್ತು ವೀಡಿಯೊಗಳನ್ನು ಅನಾವರಣಗೊಳಿಸಿದಾಗಿನಿಂದ ಪ್ರತಿಪಕ್ಷಗಳು ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುತ್ತಲೇ ಇವೆ.
ಅಶೋಕ ಸ್ತಂಭದ ಭವ್ಯವಾದ ಮತ್ತು ಆಕರ್ಷಕವಾದ ಸಿಂಹಗಳ ಬದಲಿಗೆ ಘರ್ಜನೆ ಮಾಡುತ್ತಿರುವ ಸಿಂಹಗಳನ್ನು ರಾಷ್ಟ್ರೀಯ ಲಾಂಛನದಲ್ಲಿ ತೋರಿಸಲಾಗಿದೆ ಎಂದು ಬುದ್ಧಿಜೀವಿಗಳು ಬೊಬ್ಬೆ ಹೊಡೆಯುತ್ತಿದ್ದಾರೆ.
ಆದರೆ ರಾಷ್ಟ್ರೀಯ ಲಾಂಛನವನ್ನು ರಚಿಸಿದ ಔರಂಗಾಬಾದ್ ಮೂಲದ ಶಿಲ್ಪಿ ಸುನಿಲ್ ಡಿಯೋರ್ ಅವರು ರಾಷ್ಟ್ರೀಯ ಲಾಂಛನದಲ್ಲಿನ ಸಿಂಹಗಳಿಗೆ ಯಾವುದೇ ಬದಲಾವಣೆಯನ್ನು ಮಾಡಲಾಗಿಲ್ಲ, ಕೆಳಗಿನ ಆ್ಯಂಗಲ್ನಿಂದ ಸಿಂಹಗಳನ್ನು ನೋಡಿದಾಗ ಅವು ಘರ್ಜನೆ ಮಾಡಿದಂತೆ ಕಾಣುತ್ತವೆ ಎಂದು ಹೇಳಿದ್ದಾರೆ.
ಈ ಶಿಲ್ಪವು ಸಾರನಾಥ ಶಿಲ್ಪದ ನಿಖರವಾದ ಪ್ರತಿರೂಪವಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ರಾಷ್ಟ್ರೀಯ ಲಾಂಛನದ ವೈರಲ್ ಫೋಟೋವನ್ನು ವೈಡ್ ಆ್ಯಂಗಲ್ನಿಂದ ತೆಗೆಯಲಾಗಿದ್ದು, ಇದರಿಂದಾಗಿ ಸಿಂಹದ ಮುಖ ಆಕ್ರಮಣಕಾರಿಯಾಗಿ ಕಾಣಿಸುತ್ತದೆ. ನಾವು ಏನನ್ನೂ ಬದಲಾಯಿಸಿಲ್ಲ ಎಂದು ಅವರು ಹೇಳಿದ್ದಾರೆ.
Mumbai | The sculpture is a replica of the Sarnath sculpture. The photo that is going viral was taken from a wide-angle & due to it, lion's face is looking aggressive. We've not changed anything: Sunil Deore, sculptor of the national emblem installed atop new Parliament building pic.twitter.com/BD0mbHFE41
— ANI (@ANI) July 13, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.