ನವದೆಹಲಿ: ಆಂಧ್ರಪ್ರದೇಶ, ಗುಜರಾತ್, ಹರಿಯಾಣ, ಕರ್ನಾಟಕ, ಪಂಜಾಬ್, ತಮಿಳುನಾಡು ಮತ್ತು ತೆಲಂಗಾಣ ಈ ಏಳು ರಾಜ್ಯಗಳು ಉದ್ಯಮ ಸುಧಾರಣಾ ಕ್ರಿಯಾ ಯೋಜನೆ 2020 ರ ಅನುಷ್ಠಾನದ ಆಧಾರದ ಮೇಲೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸುಲಲಿತ ಉದ್ಯಮ ಶ್ರೇಯಾಂಕದಲ್ಲಿ ಉನ್ನತ ಸಾಧಕರಾಗಿ ಹೊರಹೊಮ್ಮಿವೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಈ ಬಗೆಗಿನ ವರದಿಯನ್ನು ಬಿಡುಗಡೆ ಮಾಡಿದ್ದಾರೆ.
ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ಉತ್ತರಾಖಂಡ ಮತ್ತು ಉತ್ತರ ಪ್ರದೇಶಗಳನ್ನು ಶ್ರೇಯಾಂಕದಲ್ಲಿ ಸಾಧಕರು ಎಂದು ವರ್ಗೀಕರಿಸಲಾಗಿದೆ.
ಹೂಡಿಕೆದಾರರ ವಿಶ್ವಾಸವನ್ನು ಹೆಚ್ಚಿಸುವುದು, ವ್ಯಾಪಾರ-ಸ್ನೇಹಿ ವಾತಾವರಣವನ್ನು ಬೆಳೆಸುವುದು ಮತ್ತು ವ್ಯಾಪಾರದ ಅನುಷ್ಠಾನದಲ್ಲಿ ರಾಜ್ಯಗಳ ಕಾರ್ಯಕ್ಷಮತೆಯನ್ನು ನಿರ್ಣಯಿಸುವ ವ್ಯವಸ್ಥೆಯ ಮೂಲಕ ಆರೋಗ್ಯಕರ ಸ್ಪರ್ಧೆಯ ಅಂಶವನ್ನು ಪರಿಚಯಿಸುವ ಮೂಲಕ ದೇಶಾದ್ಯಂತ ಸುಲಲಿತ ವ್ಯಾಪಾರವನ್ನು ಹೆಚ್ಚಿಸುವುದು ಈ ಶ್ರೇಯಾಂಕದ ಗುರಿಯಾಗಿದೆ.
ಉದ್ಯಮ ಸುಧಾರಣೆಗಳ ಕ್ರಿಯಾ ಯೋಜನೆ (BRAP)ಯ ಮಹತ್ವಾಕಾಂಕ್ಷಿ ವಿಭಾಗವು ಅಸ್ಸಾಂ, ಕೇರಳ ಮತ್ತು ಗೋವಾ ಸೇರಿದಂತೆ ಏಳು ರಾಜ್ಯಗಳನ್ನು ಒಳಗೊಂಡಿದೆ. ಈ ವಿಭಾಗದ ಇತರ ರಾಜ್ಯಗಳೆಂದರೆ ಛತ್ತೀಸ್ಗಢ, ಜಾರ್ಖಂಡ್, ಕೇರಳ, ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳ.
Fifth edition of Business Reforms Action Plan marks a shift in assessment of States/UTs from rankings to gradings.
States Categorised as Top Achievers, Achievers, Aspirers and Emerging Business Ecosystems based on the feedback for the reforms carried out.#IndiaMeansBusiness pic.twitter.com/WKwubfMSJK
— Piyush Goyal (@PiyushGoyal) June 30, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.