ಡೆಹ್ರಾಡೂನ್: ಹಿಂದೂಗಳ ವಾರ್ಷಿಕ ಪುಣ್ಯ ಯಾತ್ರೆ ಚಾರಧಾಮ್ ಯಾತ್ರೆ ಭರದಿಂದ ಸಾಗುತ್ತಿದೆ. ಈಗಾಗಲೇ ಲಕ್ಷಾಂತರ ಜನರು ಯಾತ್ರೆ ಕೈಗೊಂಡು ಪುನೀತರಾಗಿದ್ದಾರೆ.
ಚಾರ್ ಧಾಮ ಯಾತ್ರೆಗೆ ಈ ವರ್ಷ ದಾಖಲೆ ಸಂಖ್ಯೆಯ ಭಕ್ತರು ಭೇಟಿ ನೀಡಿದ್ದಾರೆ. ಯಾತ್ರೆ ಪ್ರಾರಂಭವಾದ ಮೊದಲ ಒಂದು ತಿಂಗಳಲ್ಲೇ 18 ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಗುರುವಾರ ಸಂಜೆ 4 ಗಂಟೆಯವರೆಗೆ ಬದರಿನಾಥಕ್ಕೆ 6,18,312 ಭಕ್ತರು ಆಗಮಿಸಿದ್ದಾರೆ ಮತ್ತು ಕೇದಾರನಾಥಕ್ಕೆ 5,98590 ಭಕ್ತರು ಆಗಮಿಸಿದ್ದಾರೆ.
ಮೂಲಗಳ ಪ್ರಕಾರ ಗಂಗೋತ್ರಿಗೆ 3,39,090 ಯಾತ್ರಿಕರು ಮತ್ತು ಯಮುನೋತ್ರಿಗೆ 2,50,398 ಯಾತ್ರಿಕರು ಆಗಮಿಸಿದ್ದಾರೆ ಎಂದು ಬದರಿನಾಥ ಕೇದಾರನಾಥ ದೇಗುಲ ಸಮಿತಿಯ ಮಾಧ್ಯಮ ಉಸ್ತುವಾರಿ ಹರೀಶ್ ಗೌಡ ಅವರು ತಿಳಿಸಿದ್ದಾರೆ.
ಈ ಮೂಲಕ ಇದುವರೆಗೆ ಹುಟ್ಟು 18,01,209 ಭಕ್ತರು ಚಾರ್ಧಾಮ್ ಯಾತ್ರೆಯನ್ನು ಕೈಗೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.