ನವದೆಹಲಿ: ಪಿಎಂ ಸಾಮಿತ್ವ ಯೋಜನೆಯು ಗ್ರಾಮಗಳಲ್ಲಿನ ಆಸ್ತಿಯ ಡಿಜಿಟಲ್ ಮ್ಯಾಪಿಂಗ್ ನಡೆಸಲು ಸಹಾಯ ಮಾಡಿದೆ ಎಂದು ಇಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
“ಪ್ರಧಾನಿ ಸ್ವಾಮಿತ್ವ ಯೋಜನೆಯು ಹಳ್ಳಿಗಳಲ್ಲಿನ ಆಸ್ತಿಯ ಡಿಜಿಟಲ್ ಮ್ಯಾಪಿಂಗ್ಗೆ ಸಹಾಯ ಮಾಡಿದೆ. ಇದು ಮಾನವ ಹಸ್ತಕ್ಷೇಪವನ್ನು ಕಡಿಮೆ ಮಾಡಿದೆ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸಿದೆ. ಇದುವರೆಗೆ 65,000 ಆಸ್ತಿ ಕಾರ್ಡ್ಗಳನ್ನು ನೀಡಲಾಗಿದೆ” ಎಂದು ಭಾರತ್ ಡ್ರೋನ್ ಮಹೋತ್ಸವದ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ವೇಳೆ ಮೋದಿ ಹೇಳಿದ್ದಾರೆ.
ನಮ್ಮ ರೈತರ ಬದುಕನ್ನು ಹಸನುಗೊಳಿಸುವಲ್ಲಿ ಡ್ರೋನ್ಗಳು ಬಹುಮುಖ್ಯ ಪಾತ್ರವನ್ನು ವಹಿಸಲಿವೆ. ಇದಕ್ಕೆ ಸ್ವಾಮಿತ್ವ ಯೋಜನೆ ಉತ್ತಮ ಉದಾಹರಣೆಯಾಗಿದೆ ಎಂದು ಅವರು ಹೇಳಿದರು.
SVAMITVA (ಗ್ರಾಮ ಪ್ರದೇಶಗಳಲ್ಲಿ ಸುಧಾರಿತ ತಂತ್ರಜ್ಞಾನದೊಂದಿಗೆ ಗ್ರಾಮಗಳ ಸಮೀಕ್ಷೆ ಮತ್ತು ಮ್ಯಾಪಿಂಗ್) ಯೋಜನೆಯನ್ನು ಪ್ರಧಾನ ಮಂತ್ರಿಯವರು ಏಪ್ರಿಲ್ 24, 2020 ರಂದು ಪ್ರಾರಂಭಿಸಿದರು, ಪ್ರತಿ ಗ್ರಾಮೀಣ ಜನರಿಗೆ ಆಸ್ತಿ ಹಕ್ಕುಗಳ ದಾಖಲೆಯನ್ನು ಒದಗಿಸುವ ಮೂಲಕ ಗ್ರಾಮೀಣ ಭಾರತದ ಆರ್ಥಿಕ ಪ್ರಗತಿಯನ್ನು ಸಕ್ರಿಯಗೊಳಿಸುವ ಸಂಕಲ್ಪವನ್ನು ಈ ಯೋಜನೆ ಹೊಂದಿಎ.
ಈ ಸಂದರ್ಭದಲ್ಲಿ ಡ್ರೋನ್ಗಳ ಮಹತ್ವ ತಿಳಿಸಿದ ಪ್ರಧಾನಿ, “ಡ್ರೋನ್ ನಮಗೆ ಒಂದು ಸ್ಮಾರ್ಟ್ ಸಾಧನವಾಗಿದೆ, ಅದು ಶೀಘ್ರದಲ್ಲೇ ಪ್ರತಿಯೊಬ್ಬ ನಾಗರಿಕನ ಜೀವನದ ಭಾಗವಾಗಲಿದೆ. ಕೃಷಿಯಿಂದ ರಕ್ಷಣೆ, ಪ್ರವಾಸೋದ್ಯಮ, ಆರೋಗ್ಯ ರಕ್ಷಣೆಗೆ – ಡ್ರೋನ್ಗಳು ಸುಧಾರಣೆಗೆ ಸಹಾಯ ಮಾಡುತ್ತವೆ. ದೇಶದಲ್ಲಿನ ಕ್ಷೇತ್ರಗಳಾದ್ಯಂತ ಗುಣಮಟ್ಟ ವೃದ್ಧಿಸುತ್ತವೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.