ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಡಿಲಿಮಿಟೇಶನ್ ಆಯೋಗವು ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಸ್ಥಾನಗಳ ಪುನರ್ ರಚನೆಯ ಅಂತಿಮ ಆದೇಶಕ್ಕೆ ಸಹಿ ಹಾಕಿದೆ. ಸಮಿತಿಯು ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ಮತ್ತು ಸಂಸತ್ತಿನ ಕ್ಷೇತ್ರಗಳ ಗಡಿಗಳನ್ನು ಮರುಹೊಂದಿಸುವ ಕಾರ್ಯದ ಜವಾಬ್ದಾರಿ ಹೊತ್ತಿತ್ತು.
ಇಂದು ಸಮಿತಿಯು ಅಂತಿಮ ಕರಡು ಪ್ರತಿಯನ್ನು ಸಲ್ಲಿಸಿದೆ. ಹೀಗಾಗಿ ಕಣಿವೆಯಲ್ಲಿ ಬಹು ನಿರೀಕ್ಷಿತ ವಿಧಾನಸಭಾ ಚುನಾವಣೆ ಶೀಘ್ರದಲ್ಲೇ ನಡೆಯುವ ನಿರೀಕ್ಷೆ ಇದೆ.
ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಾಧೀಶ ರಂಜನಾ ಪ್ರಕಾಶ್ ದೇಸಾಯಿ ನೇತೃತ್ವದ ಮೂರು ಸದಸ್ಯರ ಡಿಲಿಮಿಟೇಶನ್ ಆಯೋಗವನ್ನು ಮಾರ್ಚ್ 2020 ರಲ್ಲಿ ಒಂದು ವರ್ಷದ ಅವಧಿಗೆ ರಚಿಸಲಾಯಿತು. ನಂತರ, ಸಮಿತಿಯು ಮಾರ್ಚ್ 3, 2021 ರಂದು ಕೇಂದ್ರ ಸರ್ಕಾರದಿಂದ ಒಂದು ವರ್ಷದ ವಿಸ್ತರಣೆಯನ್ನು ಪಡೆದುಕೊಂಡಿತು ಮತ್ತು ನಂತರ ಈ ವರ್ಷದ ಫೆಬ್ರವರಿಯಲ್ಲಿ ಎರಡು ತಿಂಗಳ ವಿಸ್ತರಣೆಯನ್ನು ಪಡೆಯಿತು. ಆಯೋಗವು ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಮತ್ತು ಉಪ ಚುನಾವಣಾ ಆಯುಕ್ತ ಚಂದರ್ ಭೂಷಣ್ ಕುಮಾರ್, ರಾಜ್ಯ ಚುನಾವಣಾ ಆಯುಕ್ತ (ಎಸ್ಇಸಿ) ಕೆಕೆ ಶರ್ಮಾ ಮತ್ತು ಮುಖ್ಯ ಚುನಾವಣಾ ಅಧಿಕಾರಿ ಹೃದೇಶ್ ಕುಮಾರ್ ಅವರನ್ನು ಕೂಡ ಸದಸ್ಯರನ್ನಾಗಿ ಒಳಗೊಂಡಿದೆ.
ಡಿಲಿಮಿಟೇಶನ್ ಸಂಸತ್ತಿನ ಅಥವಾ ವಿಧಾನಸಭಾ ಕ್ಷೇತ್ರಗಳ (ಇತ್ತೀಚಿನ ಜನಗಣತಿಯ ದತ್ತಾಂಶದ ಆಧಾರದ ಮೇಲೆ) ಗಡಿಗಳನ್ನು ಗುರುತಿಸುವ ಪ್ರಕ್ರಿಯೆಯಾಗಿದೆ. ಪ್ರತಿ ಜನಗಣತಿಯ ನಂತರ ಡಿಲಿಮಿಟೇಶನ್ ಪ್ರಕ್ರಿಯೆಯನ್ನು ಕೈಗೊಳ್ಳಲಾಗುತ್ತದೆ. ಇದು ರಾಜಕೀಯವಾಗಿ ಸೂಕ್ಷ್ಮ ಪ್ರಕ್ರಿಯೆಯಾಗಿರುವುದರಿಂದ ಇದನ್ನು ಕೇಂದ್ರ ಅಥವಾ ರಾಜ್ಯ ಸರ್ಕಾರ ನಡೆಸುವುದಿಲ್ಲ. ಬದಲಿಗೆ, ಸಂವಿಧಾನದ 82 ನೇ ವಿಧಿಯ ಅಡಿಯಲ್ಲಿ ಡಿಲಿಮಿಟೇಶನ್ ಆಕ್ಟ್ ಅನ್ನು ಜಾರಿಗೊಳಿಸುವ ಮೂಲಕ ಡಿಲಿಮಿಟೇಶನ್ ಕಮಿಷನ್ ಎಂದು ಕರೆಯಲ್ಪಡುವ ಉನ್ನತ ಅಧಿಕಾರದ ಸಮಿತಿಯನ್ನು ಸಂಸತ್ತು ರಚಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.