ನವದೆಹಲಿ: ವಿವಿಧ ರೈತ ಸಂಘಟನೆಗಳ ವರ್ಷವಿಡೀ ಪ್ರತಿಭಟನೆಯ ಕೇಂದ್ರಬಿಂದುವಾಗಿದ್ದ ಈಗ ಹಿಂಪಡೆಯಲಾದ ಮೂರು ಕೇಂದ್ರೀಯ ಕೃಷಿ ಕಾನೂನುಗಳನ್ನು ಸುಮಾರು 86% ರೈತರು ಬೆಂಬಲಿಸಿದ್ದಾರೆ ಎಂದು ಸುಪ್ರೀಂಕೋರ್ಟ್ ನೇಮಿಸಿದ ಸಮಿತಿಯು ತಿಳಿಸಿದೆ.
“3.3 ಕೋಟಿಗೂ ಹೆಚ್ಚು ರೈತರನ್ನು ಪ್ರತಿನಿಧಿಸುವ ಸುಮಾರು 85.7 ಪ್ರತಿಶತ ರೈತ ಸಂಘಟನೆಗಳು ಕೃಷಿ ಕಾನೂನುಗಳನ್ನು ಬೆಂಬಲಿಸಿವೆ” ಎಂದು ಸಮಿತಿಯು ತನ್ನ ಸಂಶೋಧನೆಗಳಲ್ಲಿ ತಿಳಿಸಿದೆ. ಸಂಬಂಧಪಟ್ಟವರ ಜೊತೆಗಿನ ಸಮಿತಿಯ ದ್ವಿಪಕ್ಷೀಯ ಸಂವಾದಗಳು ಕೇವಲ 13.3 ಪ್ರತಿಶತದಷ್ಟು ರೈತರು ಮೂರು ಕಾನೂನುಗಳ ಪರವಾಗಿಲ್ಲ ಎಂಬುದನ್ನು ತೋರಿಸಿದೆ.
ಸುಪ್ರೀಂಕೋರ್ಟ್ ನೇಮಿಸಿದ ಸಮಿತಿಯು ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ಸಂಪೂರ್ಣ ರದ್ದತಿಯ ಪರವಾಗಿಲ್ಲ, ಬದಲಿಗೆ ರಾಜ್ಯಗಳಿಗೆ ನಿಗದಿತ ಬೆಲೆಗೆ ಬೆಳೆಗಳ ಖರೀದಿ ನಿರ್ಧಾರವನ್ನು ಬಿಡಬೇಕು ಮತ್ತು ಅಗತ್ಯ ಸರಕುಗಳ ಕಾಯಿದೆಯನ್ನು ರದ್ದುಗೊಳಿಸಬೇಕು ಎಂದು ಸೂಚಿಸಿದೆ.
“ಈ ಕಾನೂನುಗಳನ್ನು ರದ್ದುಗೊಳಿಸುವುದು ಅಥವಾ ದೀರ್ಘಾವಧಿಗೆ ಅಮಾನತುಗೊಳಿಸುವುದರಿಂದ ಕೃಷಿ ಕಾನೂನುಗಳನ್ನು ಬೆಂಬಲಿಸುವ ಬಹು ಜನರಿಗೆ ಅನ್ಯಾಯವಾಗುತ್ತದೆ” ಎಂದು ಹೇಳಿದೆ. ಸಮಿತಿಯು ಕಾನೂನುಗಳ ಅನುಷ್ಠಾನ ಮತ್ತು ವಿನ್ಯಾಸಗಳಲ್ಲಿ ಕೆಲವು ಬದಲಾವಣೆಗಳನ್ನು ತರಲು ಒಲವು ತೋರಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.